ನವದೆಹಲಿ : ಗೋಧಿ ರಫ್ತಿಗೆ ಮೇ ತಿಂಗಳಿನಲ್ಲಿ ನಿಷೇಧ ಹೇರಿದ್ದ ಕೇಂದ್ರ ಸರ್ಕಾರವು ಗೋಧಿ ಹಿಟ್ಟು ಮತ್ತು ಮೈದಾ, ರವೆ ರಫ್ತಿಗೆ ನಿರ್ಬಂಧ ವಿಧಿಸಿದೆ. ದೇಶದಲ್ಲಿ ಇವುಗಳ ಬೆಲೆ ಏರಿಕೆ ಆಗಬಾರದು ಎಂಬ ಉದ್ದೇಶದಿಂದ ಕೇಂದ್ರವು ಈ ಕ್ರಮ ಕೈಗೊಂಡಿದೆ.
ಜುಲೈ 12ರ ನಂತರ ಇವುಗಳನ್ನು ರಫ್ತು ಮಾಡುವವರು ‘ಗೋಧಿ ರಫ್ತು ಕುರಿತ ಅಂತರ್ ಸಚಿವಾಲಯ ಸಮಿತಿ’ಯ ಅನುಮತಿ ಪಡೆದುಕೊಳ್ಳಬೇಕು ಎಂದು ವಿದೇಶ ವ್ಯಾಪಾರಗಳ ಮಹಾನಿರ್ದೇಶನಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.