ನವದೆಹಲಿ : ಗೋಧಿ ರಫ್ತಿಗೆ ಮೇ ತಿಂಗಳಿನಲ್ಲಿ ನಿಷೇಧ ಹೇರಿದ್ದ ಕೇಂದ್ರ ಸರ್ಕಾರವು ಗೋಧಿ ಹಿಟ್ಟು ಮತ್ತು ಮೈದಾ, ರವೆ ರಫ್ತಿಗೆ ನಿರ್ಬಂಧ ವಿಧಿಸಿದೆ. ದೇಶದಲ್ಲಿ ಇವುಗಳ ಬೆಲೆ ಏರಿಕೆ ಆಗಬಾರದು ಎಂಬ ಉದ್ದೇಶದಿಂದ ಕೇಂದ್ರವು ಈ ಕ್ರಮ ಕೈಗೊಂಡಿದೆ.
ಜುಲೈ 12ರ ನಂತರ ಇವುಗಳನ್ನು ರಫ್ತು ಮಾಡುವವರು ‘ಗೋಧಿ ರಫ್ತು ಕುರಿತ ಅಂತರ್ ಸಚಿವಾಲಯ ಸಮಿತಿ’ಯ ಅನುಮತಿ ಪಡೆದುಕೊಳ್ಳಬೇಕು ಎಂದು ವಿದೇಶ ವ್ಯಾಪಾರಗಳ ಮಹಾನಿರ್ದೇಶನಾಲಯ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.