ಬೆಂಗಳೂರು: ಸರಕುಗಳನ್ನು ಪೂರೈಸದೆ ನಕಲಿ ಜಿಎಸ್ಟಿ ಇನ್ವಾಯಿಸ್ ನೀಡಿ ವಂಚಿಸಿದ ಆರೋಪದ ಮೇಲೆ ಜಿಎಸ್ಟಿ ಬೇಹುಗಾರಿಕೆ ಮಹಾನಿರ್ದೇಶನಾಲಯದ ಬೆಂಗಳೂರು ವಲಯದ ಅಧಿಕಾರಿಗಳು ನಗರದಲ್ಲಿ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಒಬ್ಬ ಚಾರ್ಟರ್ಡ್ ಅಕೌಂಟಂಟ್ ಕೂಡ ಸೇರಿದ್ದಾರೆ. ₹ 2,364 ಕೋಟಿ ಮೊತ್ತದ ನಕಲಿ ಸರಕುಪಟ್ಟಿ ಸಲ್ಲಿಸಿದ್ದ ವಂಚಕರು ₹ 385 ಕೋಟಿಗಳ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆದುಕೊಂಡಿದ್ದರು.
ಬೆಂಗಳೂರು ಮತ್ತು ದೆಹಲಿಯಲ್ಲಿ ದಾಳಿ ನಡೆಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.