ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ಜೂನ್ ಅವಧಿಯಲ್ಲಿ ಜಿಎಸ್ಟಿ ಅಧಿಕಾರಿಗಳು ₹ 7,421 ಕೋಟಿ ಮೊತ್ತದ ತೆರಿಗೆ ವಂಚನೆಯನ್ನು ಪತ್ತೆ ಮಾಡಿದ್ದಾರೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
2020–21ನೇ ಹಣಕಾಸು ವರ್ಷದಲ್ಲಿ ₹ 31,233 ಕೋಟಿ ಮೊತ್ತದ 7,268 ಐಟಿಸಿ ವಂಚನೆ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹೊಸ ನೊಂದಣಿಗೆ ಆಧಾರ್ ದೃಢೀಕರಣ, ತೆರಿಗೆದಾರರ ನೋಂದಣಿಯನ್ನು ಅಮಾನತು/ರದ್ದು ಮಾಡುವ ಅವಕಾಶ, ಆರು ತಿಂಗಳವರೆಗೆ ಜಿಎಸ್ಟಿಆರ್3ಬಿ ಸಲ್ಲಿಸದೇ ಇರುವ ತೆರಿಗೆದಾರರ ನೋಂದಣಿ ರದ್ದುಪಡಿಸುವ ಮತ್ತು ಐಟಿಸಿ ತಡೆಹಿಡಿಯುವ ಅವಕಾಶ... ಹೀಗೆ ಹಲವು ರೀತಿಗಳಲ್ಲಿ ತೆರಿಗೆ ವಂಚನೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.