ADVERTISEMENT

ರೈತರಿಗಾಗಿ ಫೇಸ್‌ಬುಕ್‌ ಲೈವ್‌ ಕಾರ್ಯಾಗಾರ: ಇಫ್ಕೊ ಕಿಸಾನ್‌

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 16:44 IST
Last Updated 2 ಜುಲೈ 2020, 16:44 IST
ಸಂದೀಪ್‌ ಮಲ್ಹೋತ್ರಾ
ಸಂದೀಪ್‌ ಮಲ್ಹೋತ್ರಾ   

ನವದೆಹಲಿ: ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ರೈತರಿಗೆ ಉಪಯುಕ್ತವಾದ ಮಾಹಿತಿಗಳನ್ನು ನೀಡಲು ಇಫ್ಕೊ ಕಿಸಾನ್‌, ಪ್ರತಿ ದಿನವೂ ಬೆಳಿಗ್ಗೆ 11 ಗಂಟೆಗೆ ಫೇಸ್‌ಬುಕ್‌ ಲೈವ್ ಕಾರ್ಯಾಗಾರ ನಡೆಸುತ್ತಿದೆ.

ಕೃಷಿ ಮತ್ತು ಪೂರಕ ವಲಯಗಳಲ್ಲಿ ಉತ್ಪಾದನೆ ಹೆಚ್ಚಿಸುವುದು ಹೇಗೆ ಎನ್ನುವ ಕುರಿತು ಮೌಲ್ಯಯುತವಾದ ಮಾಹಿತಿಗಳನ್ನು ಇಫ್ಕೊ ಕಿಸಾನ್‌ ನೀಡಲಿದೆ.

‘ಸದ್ಯದ ಪರಿಸ್ಥಿತಿಯಲ್ಲಿ ಕೃಷಿಕರು ಗಮನ ಹರಿಸಬೇಕಿರುವ ಅಂಶಗಳ ಬಗ್ಗೆ ಕಾರ್ಯಾಗಾರವು ಕೇಂದ್ರೀಕೃತವಾಗಿದ್ದು, ತಜ್ಞರೊಂದಿಗೆ ಸಂವಾದ ನಡೆಸುವ ಮೂಲಕರೈತರು ತಮ್ಮ ಅನುಮಾನಗಳು ಮತ್ತು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು’ ಎಂದು ಇಫ್ಕೊ ಕಿಸಾನ್‌ನ ವ್ಯವಸ್ಥಾಪಕ ನಿರ್ದೇಶಕ ಸಂದೀಪ್‌ ಮಲ್ಹೋತ್ರಾ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.