ADVERTISEMENT

ದೋಣಿಮಲೈ: ಹರಾಜು ಮುಂದೂಡಿದ ಸರ್ಕಾರ

ಪಿಟಿಐ
Published 25 ಆಗಸ್ಟ್ 2019, 19:45 IST
Last Updated 25 ಆಗಸ್ಟ್ 2019, 19:45 IST
   

ನವದೆಹಲಿ: ಬಳ್ಳಾರಿ ಜಿಲ್ಲೆಯದೋಣಿಮಲೈಕಬ್ಬಿಣ ಅದಿರು ಪ್ರದೇಶದ ಹರಾಜು ಪ್ರಕ್ರಿಯೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಮುಂದೂಡಿದೆ.

ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮಕ್ಕೆ (ಎನ್‌ಎಂಡಿಸಿ) ನೀಡಿದ್ದ ಗಣಿಗಾರಿಕೆ ಗುತ್ತಿಗೆ ಅವಧಿ ವಿಸ್ತರಣೆಯನ್ನು ರದ್ದುಪಡಿಸಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಗಣಿಗಾರಿಕೆ ನ್ಯಾಯಮಂಡಳಿಯು ತಡೆ ನೀಡಿದೆ. ಹೀಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ದೋಣಿಮಲೈ ಪ್ರದೇಶದಲ್ಲಿ ಎಂಎಲ್‌ ಸಂಖ್ಯೆ 2396 ಬ್ಲಾಕ್‌ನಲ್ಲಿ ಗಣಿ ಗುತ್ತಿಗೆ ನಡೆಸುವ ಸಂಬಂಧ ಆನ್‌ಲೈನ್‌ ಹರಾಜು ಪ್ರಕ್ರಿಯೆಗೆ ಆಗಸ್ಟ್ 20ರಂದು ಬಿಡ್‌ ಆಹ್ವಾನಿಸಲಾಗಿತ್ತು. ಅದನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ ಎಂದು ರಾಜ್ಯ ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.