ಬೆಂಗಳೂರು: ಸುಧಾ ಕೋ–ಆಪರೇಟಿವ್ ಬ್ಯಾಂಕ್ 2018-19ನೇ ಹಣಕಾಸು ವರ್ಷದಲ್ಲಿ ₹ 3.73 ಕೋಟಿ ನಿವ್ವಳ ಲಾಭಗಳಿಸಿದೆ.
ಬ್ಯಾಂಕ್ನ 42ನೆ ಸರ್ವ ಸದಸ್ಯರ ಸಭೆಯು ಶೇ 12ರಷ್ಟು ಲಾಭಾಂಶ ನೀಡುವ ನಿರ್ಧಾರ ಕೈಗೊಂಡಿದೆ. ಶೇ 1ರಷ್ಟು ಲಾಭಾಂಶದ ಮೊತ್ತಕ್ಕೆ ಬ್ಯಾಂಕ್ನ ಸಿಬ್ಬಂದಿಯ ಒಂದು ದಿನದ ವೇತನ ಸೇರಿಸಿ ಒಟ್ಟು ₹ 20 ಲಕ್ಷಗಳನ್ನು ಮುಖ್ಯಮಂತ್ರಿಗಳ ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ ನೀಡಲು ನಿರ್ಧರಿಸಲಾಗಿದೆ.
‘10 ಶಾಖೆಗಳನ್ನು ಹೊಂದಿರುವ ಬ್ಯಾಂಕ್ನ ಠೇವಣಿ ಮೊತ್ತ ₹ 317.46 ಕೋಟಿ, ಸಾಲ ಮತ್ತು ಮುಂಗಡ ₹ 184 ಕೋಟಿ ಹಾಗೂ ದುಡಿಯುವ ಬಂಡವಾಳವು ₹ 369 ಕೋಟಿಗಳಷ್ಟಿದೆ. ವಸೂಲಾಗದ ಸಾಲದ ಪ್ರಮಾಣವು (ಎನ್ಪಿಎ) ಶೇ 0.69 ಇದೆ’ ಎಂದು ಬ್ಯಾಂಕ್ನ ಅಧ್ಯಕ್ಷ ಅಧ್ಯಕ್ಷ ಡಾ. ಎಂ.ತಿಮ್ಮೇಗೌಡ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.