ನವದೆಹಲಿ: ಪಿಂಚಣಿ ಯೋಜನೆಗೆ (ಇಪಿಎಸ್) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಶೀಘ್ರವೇ ಅನುಷ್ಠಾನಕ್ಕೆ ತರುವ ಕುರಿತು ಚರ್ಚಿಸಲು ಇಪಿಎಫ್ಒ ಧರ್ಮದರ್ಶಿಗಳ ಮಂಡಳಿಯ ವಿಶೇಷ ಸಭೆ ಕರೆಯುವಂತೆ ಕಾರ್ಮಿಕ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.
‘ತಿಂಗಳ ಪಿಂಚಣಿ ಮೊತ್ತವು ಕನಿಷ್ಠ ₹ 5 ಸಾವಿರ ಇರಬೇಕು ಎನ್ನುವುದು ನನ್ನ ಬೇಡಿಕೆ’ ಎಂದು ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ಕಾರ್ಯಕರ್ತ ಮತ್ತು ಇಪಿಎಫ್ಒ ಟ್ರಸ್ಟಿ ಪ್ರಭಾಕರ್ ಭಾಣಾಸುರೆ ಹೇಳಿದ್ದಾರೆ.
ಇಪಿಎಸ್ಗೆ 2014ರಲ್ಲಿ ತಂದ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.