ಚೆಲುವನಾರಾಯಣಸ್ವಾಮಿಯ ದಿವ್ಯಸಾನ್ನಿಧ್ಯವಿರುವ ಮಂಡ್ಯಜಿಲ್ಲೆಯ ಮೇಲುಕೋಟೆ ದೇವಾಲಯದಲ್ಲಿ ವರ್ಷವಿಡಿ ಉತ್ಸವಗಳು, ಮಹೋತ್ಸವಗಳು, ಜಾತ್ರೆಗಳು ನಡೆಯುತ್ತವೆ. ಇವುಗಳಲ್ಲಿಜಾನಪದದ ವೈಭವವನ್ನು ಪ್ರೋತ್ಸಾಹಿಸುವ ಮಹೋತ್ಸವ ರಥಸಪ್ತಮಿ ಮೆರವಣಿಗೆ ವಿಶೇಷವಾಗಿದೆ. ಧಾರ್ಮಿಕ ಮಹತ್ವದೊಂದಿಗೆ ಜಾನಪದ ಕಲೆಯ ಹಲವು ಆಯಾಮಗಳು ಸೇರಿಕೊಂಡು ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ.ಫೆಬ್ರುವರಿ ಒಂದರಂದು, ಬೆಳಗ್ಗೆ 6 ಗಂಟೆಯಿಂದ 9ರವರೆಗೆ ಸೂರ್ಯಮಂಡಲವಾಹನ ಸಾಗುವ ಮೆರವಣಿಗೆಯುದ್ದಕ್ಕೂ 50ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಲಿವೆ.
ಕಲಾಪ್ರಕಾರಗಳು: ಚಿಲಿಪಿಲಿಗೊಂಬೆ ಮರಗಾಲುಕುಣಿತ, ಕೀಲುಕುದುರೆ ಕರಗದನೃತ್ಯ, ಮೈಸೂರುನಗಾರಿ, ನಾಸಿಕ್ಡೋಲ್, ಜಾಂಜ್ಮೇಳ , ಕರಡಿಮಜಲು, ನಂದಿಕಂಬ, ಪಟಾಕುಣಿತ. ಗಾರುಡಿಗೊಂಬೆ, ಹುಲಿವೇಷ, ವೀರಗಾಸೆ. ಕೋಲಾಟ, ಡೊಳ್ಳುಕುಣಿತ, ಜಾಂಜ್ ಮೇಳ, ಸೋಮನಕುಣಿತ. ಚಕ್ರಾದಿಬಳೆ, ಖಡ್ಗಪವಾಡ, ವೀರಭದ್ರನಕುಣಿತ, ಗಾರುಡಿಗೊಂಬೆಗಳು, ವೀರಮಕ್ಕಳಕುಣಿತ, ಕಂಸಾಳೆ, ನಾದಸ್ವರ, ಚಂಡೆನಗಾರಿ ಜಡೆಕೋಲಾಟ, ಭಾಗವಂತಿಕೆಮೇಳ, ಕರಡಿಕುಣಿತ ವಿಧದ ಜಾನಪದ ಕಲೆಗಳ ತಂಡಗಳು ಗ್ರಾಮೀಣ ಕಲೆಗಳ ಸೊಗಡನ್ನು ಉಣಬಡಿಸಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.