ADVERTISEMENT

ತುಳಸಿ ಹಬ್ಬದಂದು ಈ ತಪ್ಪುಗಳನ್ನು ಮಾಡಬೇಡಿ: ಇಲ್ಲಿದೆ ಮಹತ್ವದ ಮಾಹಿತಿ

ಎಲ್.ವಿವೇಕಾನಂದ ಆಚಾರ್ಯ
Published 31 ಅಕ್ಟೋಬರ್ 2025, 0:35 IST
Last Updated 31 ಅಕ್ಟೋಬರ್ 2025, 0:35 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ತುಳಸಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ತುಳಸಿ ಗಿಡಕ್ಕೆ ಪೂಜೆ ಸಲ್ಲಿಸುವುದರಿಂದ ಮನೆಯವರಿಗೆ ಶುಭವಾಗಲಿದೆ ಎಂಬ ನಂಬಿಕೆ ಇದೆ. ಈ ಕಾರಣದಿಂದಾಗಿ ತುಳಸಿ ಗಿಡದ ಪೂಜೆ ಹೆಚ್ಚು ಮಹತ್ವ ಪಡೆದಿದೆ.

ತುಳಸಿ ಹಬ್ಬದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಹಾಗೂ ಈ ದಿನ ಪಾಲಿಸಬೇಕಾದ ಅಂಶಗಳು ಯಾವುವು ಎಂಬುದನ್ನು‌ ಜ್ಯೋತಿಷಿ ಎಲ್‌. ವಿವೇಕಾನಂದ ಆಚಾರ್ಯ ಅವರು ತಿಳಿಸಿದ್ದಾರೆ.

ADVERTISEMENT
  • ತುಳಸಿ ಹಬ್ಬದಂದು ತುಳಸಿ ಗಿಡದ ಎಲೆ ಅಥವಾ ತುಳಸಿ ಗಿಡವನ್ನು ಕಿತ್ತು ಹಾಕಬಾರದು.

  • ತುಳಸಿ ಹಬ್ಬವನ್ನು ಆಚರಣೆ ಮಾಡುವವರು ಈ ದಿನ ಮಾಂಸಾಹಾರ ಸೇವನೆ ಮಾಡಬಾರದು.

  • ಹಬ್ಬದ ದಿನ ಕೆಟ್ಟ ಆಲೋಚನೆಗಳನ್ನು ಮಾಡುವುದು, ಇತರರನ್ನು ನಿಂದಿಸುವುದು ಹಾಗೂ ಬೈಯುವುದನ್ನು ಮಾಡಬಾರದು.

  • ಈ ದಿನ ಹಿರಿಯರಿಗೆ ಅವಮಾನಿಸಿದರೆ, ಮಹಾಲಕ್ಷ್ಮೀಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಜ್ಯೋತಿಷ ಹೇಳುತ್ತದೆ. 

ತುಳಸಿ ಹಬ್ಬದ ದಿನ ಈ ಕೆಳಗಿನ ಅಂಶಗಳನ್ನು ಪಾಲಿಸಿದರೆ ಶುಭವಾಗಲಿದೆ. 

  • ತುಳಸಿ ಹಬ್ಬದಂದು ತುಳಸಿ ಗಿಡವನ್ನು ಪೂಜಿಸಿ ದೀಪ ಹಚ್ಚುವುದರಿಂದ ಲಕ್ಷ್ಮೀಯ ಕೃಪೆ ದೊರೆಯುತ್ತದೆ ಎಂಬ ನಂಬಿಕೆ ಇದೆ. 

  • ಹಬ್ಬದ ದಿನ ತುಳಸಿ ಗಿಡವನ್ನು ದಾನವಾಗಿ ಕೊಡುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. 

  • ದೇವಾಲಯಗಳಿಗೆ ತುಳಸಿ ಗಿಡವನ್ನು ದಾನದ ರೂಪದಲ್ಲಿ ನೀಡುವುದರಿಂದ ಒಳಿತಾಗುತ್ತದೆ. 

  • ಈ ದಿನ ತುಳಸಿಗೆ ಕೆಂಪು ಬಟ್ಟೆ ಹಾಗೂ ಮಂಗಳ ದ್ರವ್ಯಗಳನ್ನು ಅರ್ಪಿಸಿ ಪೂಜಿಸುವುದರಿಂದ ಶುಭಫಲ ದೊರೆಯುತ್ತದೆ ಎಂದು ಜ್ಯೋತಿಷಿ ಎಲ್‌.ವಿವೇಕಾನಂದ ಆಚಾರ್ಯ ಅವರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.