ADVERTISEMENT

ತೋಳ ಕಚ್ಚಿ ಐವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST
ತೋಳ ಕಚ್ಚಿ ಐವರಿಗೆ ಗಾಯ
ತೋಳ ಕಚ್ಚಿ ಐವರಿಗೆ ಗಾಯ   

 ಗದಗ:   ತೋಳ ಕಚ್ಚಿ ಐವರು ತೀವ್ರವಾಗಿ ಗಾಯಗೊಂಡ ಘಟನೆ ಇಲ್ಲಿಗೆ ಸಮೀಪದ ಹಾತಲಗೇರಿಯಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.

ರಾಮಣ್ಣ ಹೊಂಬಾಳ, ಹನುಮಪ್ಪ ಅಬ್ಬಿಗೇರಿ, ಶಿವಮ್ಮ ಡೊಳ್ಳಿನ, ಕರಿಯಪ್ಪ ಗದಗ, ಮಂಜಪ್ಪ ಮುರ್ಲಾಪೂರ ಗಾಯಗೊಂಡಿದ್ದಾರೆ. ಇವರಲ್ಲಿ ಹನುಮಪ್ಪ ಹಾಗೂ ಶಿವಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಉಳಿದ ಮೂವರು ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಊರ ಸಮೀಪದ ಜಮೀನಿನ ಕಣದಲ್ಲಿ ಇದ್ದ ಜೋಳದ ರಾಶಿಯನ್ನು ನೋಡಿ ಕೊಳ್ಳಲು ಮಲಗಿದ್ದ ನಾಲ್ವರು ಪುರುಷರನ್ನು ನಸುಕಿನ ಜಾವ ತೋಳ ಕಚ್ಚಿ ಗಾಯಗೊಳಿಸಿದೆ. ಅಲ್ಲದೆ ಜಮೀನಿನ ಹತ್ತಿರದಲ್ಲಿಯೇ ಇದ್ದ ಮನೆಯ ಜಗುಲಿ ಮೇಲೆ ಮಲಗಿದ್ದ ಶಿವಮ್ಮ ಡೊಳ್ಳಿನ ಅವರನ್ನು ಸಹ ತೋಳ ಕಡಿದು ಗಾಯಗೊಳಿಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.