ಮುಧೋಳ: ತಾಲ್ಲೂಕಿನ ತಿಮ್ಮಾಪುರ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭಾನುವಾರ ಚುನಾವಣೆ ನಡೆಯಿತು.
ಒಟ್ಟು 17 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 36 ಜನ ತಮ್ಮ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದು ಸಾಮಾನ್ಯ 22, ಹಿಂದುಳಿದ ವರ್ಗ 2, ಪರಿಶಿಷ್ಟ ಜಾತಿ/ಪಂಗಡ 4, ಮಹಿಳಾ 4, ಡ ವರ್ಗ 2 ಹಾಗೂ ಬ ವರ್ಗ 2 ಸ್ಥಾನಗಳಿಗೆ ಅಂತಿಮವಾಗಿ ಸ್ಪರ್ಧಾಕಣದಲ್ಲಿ ಇದ್ದಾರೆ.
ಬೆಳಿಗ್ಗೆ 9 ರಿಂದ 4ರವರೆಗೆ ನಡೆದ ಚುನಾವಣೆ ಅತ್ಯಂತ ಬಿರುಸಿನಿಂದ ಕೂಡಿತ್ತು. ಅಲ್ಲಲ್ಲಿ ಮಾತಿನ ಚಕಮುಕಿ ನಡೆಯಿತು. ಸುಡು ಬಿಸಿಲಲ್ಲೂ ಮತದಾರರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಹಿಳಾ ಮತದಾರರು ನಾವೇನೂಕಡಿಮೆ ಇಲ್ಲ ಎಂಬುದನ್ನು ನಿರೂಪಿಸಿದರು. ಶೇ 80ರಷ್ಟು ಮತದಾನವಾಯಿತು. ಅ ವರ್ಗದಲ್ಲಿ 16,279 ಜನರು ಮತದಾನ ಹಕ್ಕನ್ನು ಹೊಂದಿದ್ದರು. ಇದರಲ್ಲಿ 12, 850 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು. ಬ ವರ್ಗದಲ್ಲಿ 66 ಮತದಾರರ ಪೈಕಿ 64 ಮತದಾರರು ಮತದಾನ ಮಾಡಿದರು. ಡ ವರ್ಗದಲ್ಲಿ 433 ಮತದಾರರಲ್ಲಿ 377 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು.
ಶಾಸಕ ಗೋವಿಂದ ಕಾರಜೋಳ, ಲೋಕಸಭೆ ಕಾಂಗ್ರಸ್ ಅಭ್ಯರ್ಥಿ ಅಜಯಕುಮಾರ ಸರನಾಯಕ, ಮಾಜಿ ಸಚಿವ ಆರ್.ಬಿ. ತಿಮ್ಮಾಪುರ, ಮಾಜಿ ಶಾಸಕ ಸಿದ್ದು ಸವದಿ ಹಿರಿಯ ವಕೀಲ ತುಳಸಿಗೇರಿ ಮತಚಲಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.