ಅಮೀನಗಡ: ‘ಗ್ರಾಮ ಮತ್ತು ಪಟ್ಟಣಗಳಲ್ಲಿರುವ ಸೌಹಾರ್ದ ಸಹಕಾರಿ ಸಂಘಗಳು ಬಲವರ್ಧನೆಗೊಂಡರೆ ದೇಶ ಆರ್ಥಿಕ ಪ್ರಗತಿ ಹೊಂದಲು ಸಾಧ್ಯ’ ಎಂದು ಕುಡಿಯುವ ನೀರು ಹಾಗೂ ನೈರ್ಮಲ್ಯ ರಾಜ್ಯ ಸಮಿತಿ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ತಿಳಿಸಿದರು.
ಪಟ್ಟಣದ ಪ್ರಭುಶಂಕರೇಶ್ವರ ಗಚ್ಚಿನಮಠದಲ್ಲಿ ನಡೆದ ಶ್ರೀಮಾತಾ ಪತ್ತಿನ ಸೌಹಾರ್ದ ಸಹಕಾರಿ ಸಂಘದ ನೂತನ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘2008ರಲ್ಲಿ ಒಂದು ಲಕ್ಷ ಬಂಡವಾಳದೊಂದಿಗೆ ಪ್ರಾರಂಭವಾದ ಸೌಹಾರ್ದ ಸಂಘ, ಸತತ ಪರಿಶ್ರಮದೊಂದಿಗೆ ಪ್ರಗತಿ ಹೊಂದುತ್ತಿದೆ. 3ನೇ ಶಾಖೆ ಪ್ರಾರಂಭಗೊಳಿಸಿದ್ದಲ್ಲದೆ ₹ 4.5 ಕೋಟಿ ಬಂಡವಾಳ ಹೊಂದಿದೆ. ಲಿಂ.ಪ್ರಭುರಾಜೇಂದ್ರ ಶ್ರೀಗಳ ಆಶೀರ್ವಾದದೊಂದಿಗೆ ಸಂಘ ನಿರಂತರ ಪ್ರಗತಿ ಸಾಧಿಸುತ್ತಿದೆ’ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಸ್. ದಡ್ಡೇನವರ ಮಾತನಾಡಿ ‘ಸಹಕಾರಿ ಸಂಘಗಳು ರೈತರು ಮತ್ತು ಜನಸಾಮಾನ್ಯರ ಆರ್ಥಿಕ ಉನ್ನತಿಗೆ ಪೂರಕವಾಗಿವೆ. ಇಲ್ಲಿನ ಸಾಲ ಸೌಲಭ್ಯಗಳ ಸದುಪಯೋಗವಾಗಬೇಕು’ ಎಂದರು.
ಸಾನ್ನಿಧ್ಯ ವಹಿಸಿದ್ದ ಗಚ್ಚಿನಮಠದ ಶಂಕರರಾಜೇಂದ್ರ ಶ್ರೀ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಜಾತಾ ತತ್ರಾಣಿ ಮಾತನಾಡಿದರು. ಎ.ಆರ್.ನಿಂಬಲಗುಂದಿ ವರದಿ ವಾಚಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಬಿ.ತುಂಬಗಿ, ಸಿದ್ದಪ್ಪ ಕನ್ನೂರ, ಚನ್ನಯ್ಯ ಹೀರೆಮಠ, ಬಿ.ಎಸ್.ನಿಡಗುಂದಿ, ಅಜಮೀರ್ ಮುಲ್ಲಾ, ಉಪಾಧ್ಯಕ್ಷ ಅರವಿಂದ ಗೌಡರ, ಆಡಳಿತ ಮಂಡಳಿ ನಿರ್ದೇಶಕರಾದ ಮಲ್ಲಿಕಾರ್ಜುನ ಹವಾಲ್ದಾರ್, ಮಹಾಂತೇಶ ತೆನಹಳ್ಳಿ, ವಿಷ್ಣು ಗೌಡರ, ಶಿವಬಾಯಿ ಹುನಗುಂದ, ಕಮಲಾಬಾಯಿ ಮಸ್ಕಿ, ಅಮೀನಗಡ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಸಂಗಣ್ಣ ಕುಂಬಾರ, ತುಕಾರಾಮ ರಾಠೋಡ, ಪ್ರಭು ತೆಗ್ಗಿನಮನಿ, ಸಂಗಣ್ಣ ಕಂಬಳಿ, ಪಿ.ಎಸ್.ನಾಗರಾಳ, ಸಂಗಣ್ಣ ಪುರ್ತಗೇರಿ, ಸಂಗು ಮಠ, ಸಾಧನಾ ಗೋಕಾವಿ, ನಾಗರತ್ನಾ ಹುನಗುಂದ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.