ADVERTISEMENT

ಅಧಿಕಾರ ವಹಿಸಿಕೊಳ್ಳುವ ಬಗ್ಗೆ ಸಿಎಂ ಭೇಟಿಯ ನಂತರ ನಿರ್ಧಾರ: ಶಾಸಕ ಸಿದ್ದು ಸವದಿ

ಕೈಮಗ್ಗ ನಿಗಮದ ಅಧ್ಯಕ್ಷ ಸ್ಥಾನ ನೇಕಾರರಿಗೆ ಸಿಗಲಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 12:54 IST
Last Updated 27 ಜುಲೈ 2020, 12:54 IST
ಶಾಸಕ ಸಿದ್ದು ಸವದಿ
ಶಾಸಕ ಸಿದ್ದು ಸವದಿ   

ಬಾಗಲಕೋಟೆ: 'ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದ ಅಧಿಕಾರ ವಹಿಸಿಕೊಳ್ಳಬೇಕೆ, ಬೇಡವೇ ಎಂಬುದನ್ನು ನಿರ್ಧರಿಸುವೆ' ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

'ಸಿಎಂ ನನ್ನ ಮೇಲಿನ ಪ್ರೀತಿಯಿಂದ ನಿಗಮದ ಜವಾಬ್ದಾರಿ ವಹಿಸಿದ್ದಾರೆ. ಆದರೆ ನ್ಯಾಯವಾಗಿ ಅದು ನೇಕಾರ ಸಮುದಾಯದವರಿಗೆ ಸಿಗಬೇಕು. ಅವರಿಗೆ ಕೊಟ್ಟಿದ್ದರೆ ಅನುಕೂಲವಾಗುತ್ತಿತ್ತು. ಅದನ್ನು ಅವರಿಗೆ ಮನವರಿಕೆ ಮಾಡುವೆ‘ ಎಂದು ಸೋಮವಾರ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

’ನಾನು ಯಾವುದೇ ಸ್ಥಾನಮಾನಕ್ಕೂ ಬೇಡಿಕೆ ಇಟ್ಟಿಲ್ಲ. ಹೀಗಾಗಿ ನೇಕಾರರ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ನಮ್ಮ ತಾಲ್ಲೂಕಿನ ನೇಕಾರರ ಮುಖಂಡರು ಇಲ್ಲವೇ ರಾಜ್ಯದ ಯಾವುದೇ ಭಾಗದ ನೇಕಾರರ ಸಮುದಾಯದವರಿಗೆ ಕೊಟ್ಟರೂ ನನ್ನ ತಕರಾರು ಇಲ್ಲ‘ ಎಂದು ಸ್ಪಷ್ಟಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.