ಬಾಗಲಕೋಟೆ: ರಾಜ್ಯ ಸರ್ಕಾರದ ಶಿಫಾರಸಿನ ಮೇಲೆ ಇಲ್ಲಿನ ನಗರಸಭೆಗೆ ಐವರು ಸದಸ್ಯರನ್ನು ರಾಜ್ಯಪಾಲರು ಶುಕ್ರವಾರ ನಾಮಕರಣ ಮಾಡಿದ್ದಾರೆ.
ಬಾಗಲಕೋಟೆಯ ವಾರ್ಡ್ ನಂ 12ರ ನಿವಾಸಿ ಪ್ರದೀಪ ರೋಹಿದಾಸ ರಾಯ್ಕರ, ವಾರ್ಡ್ ನಂ 18ರ ನಿವಾಸಿ ಸುಜಾತಾ ಪ್ರಸನ್ನಕುಮಾರ ಶಿಂಧೆ, ನವನಗರ ವಾರ್ಡ್ ಸಂಖ್ಯೆ 22ರ ನಿವಾಸಿ ಬಸವರಾಜ ಸೋಮಶೇಖರಪ್ಪ ಲಾಗಲೋಟಿ, ವಾರ್ಡ್ ನಂ 10 ನಿವಾಸಿ ರಾಜೇಂದ್ರ ಪಂಚಯ್ಯ ಬಳೂಲಮಠ ಹಾಗೂ ವಾರ್ಡ್ ನಂ 11ರ ನಿವಾಸಿ ವೀರೇಶ ಸಂಗಪ್ಪ ಕೋಟಿಕಲ್ ಅವರನ್ನು ನಾಮಕರಣ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.