ADVERTISEMENT

ಬೈಕ್ ಕಳ್ಳತನ: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 1:07 IST
Last Updated 20 ಜೂನ್ 2021, 1:07 IST
ತೇರದಾಳ ಪೊಲೀಸರು ಬಂಧಿಸಿರುವ ಬೈಕ್ ಕಳವು ಪ್ರಕರಣದ ಆರೋಪಿಗಳು. ಬನಹಟ್ಟಿ ಸರ್ಕಲ್‌ ಇನ್‌ಸ್ಪೆಕ್ಟರ್‌  ಜೆ.ಕರುಣೇಶಗೌಡ, ತೇರದಾಳ ಪಿಎಸ್‌ಐ ವಿಜಯ ಕಾಂಬಳೆ ಇದ್ದಾರೆ
ತೇರದಾಳ ಪೊಲೀಸರು ಬಂಧಿಸಿರುವ ಬೈಕ್ ಕಳವು ಪ್ರಕರಣದ ಆರೋಪಿಗಳು. ಬನಹಟ್ಟಿ ಸರ್ಕಲ್‌ ಇನ್‌ಸ್ಪೆಕ್ಟರ್‌  ಜೆ.ಕರುಣೇಶಗೌಡ, ತೇರದಾಳ ಪಿಎಸ್‌ಐ ವಿಜಯ ಕಾಂಬಳೆ ಇದ್ದಾರೆ   

ತೇರದಾಳ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ತೇರದಾಳ, ರಬಕವಿ ಪಟ್ಟಣ ಹಾಗೂ ಜಮಖಂಡಿ ತಾಲ್ಲೂಕಿನ ಮರೇಗುದ್ದಿ ಗ್ರಾಮದಲ್ಲಿ ಬೈಕ್ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ತೇರದಾಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹ 1.50 ಲಕ್ಷ ಮೊತ್ತದ ಮೂರು ಬೈಕ್ ಜಪ್ತಿ ಮಾಡಿದ್ದಾರೆ.

ರಬಕವಿ ಪಟ್ಟಣದ ಬಸವರಾಜ ಹುಚ್ಚಪ್ಪ ಕೊಕ್ಕನವರ, ಬೆಳಗಾವಿ ಜಿಲ್ಲೆ ಮೂಡಲಗಿಯ ಪ್ರಭಾಕರ ಸುಭಾಸ ಮೆಣಸಿಕಾಯಿ ಹಾಗೂ ಮಹಾಲಿಂಗಪುರದ ಶಾರೂಕಖಾನ ಮುನೀರ ಶೇಖ ಬಂಧಿತರು.

ಎಸ್ಪಿ ಲೋಕೇಶ ಜಗಲಾಸರ, ಡಿಎಸ್ಪಿ ಎಂ. ಪಾಂಡುರಂಗಯ್ಯ ಅವರ ಮಾರ್ಗದರ್ಶನದಲ್ಲಿ ಬನಹಟ್ಟಿ ಸಿಪಿಐ ಜೆ. ಕರುಣೇಶಗೌಡ ಹಾಗೂ ಠಾಣಾಧಿಕಾರಿ ವಿಜಯ ಕಾಂಬಳೆ, ಎಎಸ್‌ಐ ಎಲ್.ಬಿ. ಮಾಳಿ, ಕೆ.ಎಚ್. ಸನಹಟ್ಟಿ, ಆರ್.ವೈ. ಪೂಜೇರಿ, ಎಂ.ಕೆ. ಯಳ್ಳಂಟಿ, ಎ.ಬಿ. ಸವದಿ, ಬಿ.ಎಸ್. ಚೌಲಗಿ, ಎಂ.ಎಲ್. ಬುಗಟಿ, ಎಂ.ಆರ್. ಕೆಂಚೆನ್ನವರ, ವಿ.ಎಸ್. ಅಜ್ಜನಗೌಡರ, ಎ.ಎಂ. ಜಮಖಂಡಿ ಹಾಗೂ ಬಿ.ಸಿ. ಮುದಿಬಸನಗೌಡರ ನೇತೃತ್ವದ ತಂಡ ಆರೋಪಿಗಳನ್ನು ಬಂದಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.