ADVERTISEMENT

‘ಪರಿಸರ ಸ್ವಚ್ಛಗೊಳಿಸಿ, ಮಲೇರಿಯಾ ತಡೆಗಟ್ಟಿ’

​ಪ್ರಜಾವಾಣಿ ವಾರ್ತೆ
Published 23 ಜೂನ್ 2018, 11:25 IST
Last Updated 23 ಜೂನ್ 2018, 11:25 IST
ಗುಳೇದಗುಡ್ಡದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ನಡೆಸಿದ ಮಲೇರಿಯಾ ವಿರೋಧಿ ಮಾಸಾಚರಣ ಜಾಥಾ ಮೆರವಣಿಗೆಗೆ ವೈದ್ಯರು ಡಾ. ನಾಗರಾಜ ಕುರಿ ಚಾಲನೆ ನೀಡಿದರು.
ಗುಳೇದಗುಡ್ಡದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ನಡೆಸಿದ ಮಲೇರಿಯಾ ವಿರೋಧಿ ಮಾಸಾಚರಣ ಜಾಥಾ ಮೆರವಣಿಗೆಗೆ ವೈದ್ಯರು ಡಾ. ನಾಗರಾಜ ಕುರಿ ಚಾಲನೆ ನೀಡಿದರು.   

ಗುಳೇದಗುಡ್ಡ: ಸಾರ್ವಜನಿಕರು ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಮಾತ್ರ ಮಲೇರಿಯಾ ಹಾಗೂ ಸಾಂಕ್ರಾಮಿಕ ರೋಗ ತಡೆಗಟ್ಟಬಹುದಾಗಿದೆ ಎಂದು ಪಟ್ಟಣದ ಎಸ್.ಆರ್.ವಸ್ತ್ರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದಾಧಿಕಾರಿ ನಾಗರಾಜ ಕುರಿ ಹೇಳಿದರು.

ಶುಕ್ರವಾರ ಜಿ.ಪಂ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಆರೋಗ್ಯ ಇಲಾಖೆ ಆಶ್ರಯದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಮನೆಯ ಸುತ್ತಲಿನ ತಗ್ಗು ಪ್ರದೇಶದಲ್ಲಿ ನೀರು ಸಂಗ್ರಹವಾಗಿ ಮಲಿನಗೊಳ್ಳುವುದರಿಂದ ಸೊಳ್ಳೆಗಳು ಹೆಚ್ಚಾಗುತ್ತವೆ. ಜ್ವರ, ಕೀಲು ನೋವು, ವಾಂತಿ ಭೇದಿ, ತಲೆನೋವು, ಮಲೇರಿಯಾ ರೋಗದ ಲಕ್ಷಣಗಳಾಗಿವೆ. ಈ ಲಕ್ಷಣಗಳು ಕಂಡು ಬಂದರೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.

ADVERTISEMENT

ಮಲೇರಿಯಾ ವಿರೋಧಿ ಮಾಸಾಚರಣೆ ಜಾಥಾವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಆಡಿನ ಶಾಲೆಯ ಮುಖ್ಯಶಿಕ್ಷಕ ವಿ.ಪಿ. ದೊಡಮನಿ, ಪರಶುರಾಮ ಬಂತಲ, ಎನ್.ಪಿ.ದೊಡಮನಿ, ಕೆ.ಎಸ್. ರಂಜಣಗಿ, ಎಂ.ಪಿ.ಪಾಗದ, ಎ.ಎಲ್. ಬಡಿಗೇರ, ಪ್ರಶಾಂತ ಕೆಲೂಡಿ, ಜಯಶ್ರೀ ಕಳಸಾ, ರಾಜಶೇಖರ ರಾಜನಾಳ ಹಾಗೂ ಶಾಲಾ ಶಿಕ್ಷಕ-ಶಿಕ್ಷಕಿಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.