ಬಾಗಲಕೋಟೆ: ಜನನಿಬಿಡ ಪ್ರದೇಶದಲ್ಲಿ ಕೊರೊನಾ ಸೋಂಕು ಬಾಧಿತರಿಗೆ ಹಾಗೂ ಶಂಕಿತರಿಗೆ ಐಸೋಲೇಶನ್ ವಾಡ್೯ ಬೇಡವೆಂದು ಗುರುವಾರ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.
ಇಲ್ಲಿನ ನವನಗರದಲ್ಲಿರುವ ವಾಂಬೆ ಕಾಲೋನಿಯಲ್ಲಿ ಸಕಾ೯ರಿ ಹಾಸ್ಟೆಲ್ನಲ್ಲಿ ಐಸೋಲೇಶನ್ ವಾಡ್೯ ರೂಪಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದರು.
ಅಧಿಕಾರಿಗಳ ನಿಧಾ೯ರದ ಮಾಹಿತಿ ತಿಳಿದು ಸ್ಥಳದಲ್ಲಿ ನೆರೆದ ವಾಂಬೆ ಕಾಲೋನಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಮಹಿಳೆಯರು ಪೋಲಿಸರೊಂದಿಗೆ ವಾಗ್ವಾದಕ್ಕೂ ಇಳಿದರು.
ಕೊನೆಗೆ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಒತ್ತಾಯಪೂರ್ವಕವಾಗಿ ಸ್ಥಳಗಳಲ್ಲಿ ನೆರೆದವರನ್ನು ಚದುರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.