ADVERTISEMENT

ಶ್ರೀದೇವಿ ಪುರಾಣ ಪ್ರವಚನ ಸಮಾರೋಪ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 2:57 IST
Last Updated 16 ಅಕ್ಟೋಬರ್ 2021, 2:57 IST
ಮಹಾಲಿಂಗಪುರದ ಬನಶಂಕರಿದೇವಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಹಮ್ಮಿಕೊಂಡ ಶ್ರೀದೇವಿ ಪುರಾಣ ಹಾಗೂ ದಸರಾ ಸಾಂಸ್ಕೃತಿಕ ಉತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಗಾಯಕ ರವೀಂದ್ರ ಸೋರಗಾಂವಿ ಗಾಯನ ಪ್ರಸ್ತುತಪಡಿಸಿದರು
ಮಹಾಲಿಂಗಪುರದ ಬನಶಂಕರಿದೇವಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಹಮ್ಮಿಕೊಂಡ ಶ್ರೀದೇವಿ ಪುರಾಣ ಹಾಗೂ ದಸರಾ ಸಾಂಸ್ಕೃತಿಕ ಉತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಗಾಯಕ ರವೀಂದ್ರ ಸೋರಗಾಂವಿ ಗಾಯನ ಪ್ರಸ್ತುತಪಡಿಸಿದರು   

ಮಹಾಲಿಂಗಪುರ: ಸ್ಥಳೀಯ ಬನಶಂಕರಿದೇವಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ 9 ದಿನಗಳವರೆಗೆ ಹಮ್ಮಿಕೊಂಡ ಶ್ರೀದೇವಿ ಪುರಾಣ ಹಾಗೂ ದಸರಾ ಸಾಂಸ್ಕೃತಿಕ ಉತ್ಸವದ ಸಮಾರೋಪ ಕಾರ್ಯಕ್ರಮ ಗುರುವಾರ ಸಂಜೆ ನಡೆಯಿತು.

ಹಿರಿಯ ಮಲ್ಲಪ್ಪ ಭಾವಿಕಟ್ಟಿ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸಬೇಕಿದೆ. ಜನ್ಮದಿನಾಚರಣೆ ಯಂಥಹ ಕಾರ್ಯಕ್ರಮಗಳನ್ನು ರಸ್ತೆಗಳಲ್ಲಿ ನಿಂತು ಆಚರಿಸಿಕೊಳ್ಳುತ್ತಾರೆ. ಅದರ ಬದಲಿಗೆ ದೇವಸ್ಥಾನಗಳಲ್ಲಿ ಆಚರಿಸಿಕೊಂಡರೆ ಅವರಲ್ಲಿ ಅಧ್ಯಾತ್ಮದ ಭಾವನ ಮೂಡುತ್ತದೆ. ಜತೆಗೆ ಸಂಸ್ಕೃತಿಯನ್ನು ಕಲಿಯಲು ಸಾಧ್ಯವಾಗುತ್ತದೆ ಎಂದರು.

ಮೂಡಲಗಿಯ ಸೋಮಶೇಖರಯ್ಯ ಕಂಟೀಕಾರಮಠ ಶ್ರೀದೇವಿ ಪುರಾಣದ ಪ್ರವಚನ ಹೇಳಿದರು. ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಒಂಬತ್ತು ದಿನಗಳವರೆಗೆ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಯಿತು. ಶ್ರೀಶೈಲಪ್ಪ ಬಾಡನವರ, ನಾರಾಯಣ ಕಿರಗಿ, ಲಕ್ಕಪ್ಪ ಚಮಕೇರಿ, ಗೋಲೇಶ ಅಮ್ಮಣಗಿ, ಶಂಕರ ಅಂಬಿ, ಜಯಪ್ಪಣ್ಣ ಘಟ್ನಟ್ಟಿ, ಡಾ.ಬಿ.ಡಿ. ಸೋರಗಾಂವಿ, ಚಂದು ಕಾಗಿ, ಸುನೀಲ ಜಮಖಂಡಿ, ಸತೀಶ ಸೋರಗಾಂವಿ, ಡಾ.ಎ.ಆರ್.ಬೆಳಗಲಿ ಇದ್ದರು.

ADVERTISEMENT

ಖ್ಯಾತ ಗಾಯಕ ರವೀಂದ್ರ ಸೋರಗಾಂವಿ ಗಾಯನದ ರಸದೌತಣ ನೀಡಿದರು. ನಂತರ ಜ್ಯೂ. ಉಪೇಂದ್ರ ಖ್ಯಾತಿಯ ಆರ್.ಡಿ.ಬಾಬು ಸಂಗಡಿಗರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.