ADVERTISEMENT

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಜಗಳ, ಚಾಕುವಿನಿಂದ ಇರಿದು ಯೋಧನ ಕೊಲೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 5:43 IST
Last Updated 13 ಆಗಸ್ಟ್ 2022, 5:43 IST
ಕರಿಸಿದ್ದಪ್ಪ 
ಕರಿಸಿದ್ದಪ್ಪ    

ಕುಳಗೇರಿ ಕ್ರಾಸ್ (ಬಾಗಲಕೋಟೆ ಜಿಲ್ಲೆ):ಯೋಧ ಕರಿಸಿದ್ದಪ್ಪ ಸಣ್ಣಸಿದ್ದಪ್ಪ ಕಳಸದ (25) ತನ್ನ ಪತ್ನಿಯ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದರಿಂದ ಕೋಪಗೊಂಡ ಆಕೆಯ ಸಹೋದರ ಧರೀಗೌಡ ಫಕೀರ ಗೌಡ ಧೂಳಪ್ಪನವರ, ಆತನನ್ನು ಚಾಕುವಿನಿಂದ ಇರಿದು ಗುರುವಾರ ರಾತ್ರಿ ಕೊಲೆ ಮಾಡಿದ್ದಾನೆ.

ಬಾದಾಮಿ ತಾಲ್ಲೂಕಿನ ನೀರಲಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

ನಾಲ್ಕು ದಿನಗಳ ಹಿಂದಷ್ಟೇ ಸ್ವಗ್ರಾಮಕ್ಕೆ ರಜೆ ಮೇಲೆ ಬಂದಿದ್ದಕರಿಸಿದ್ದಪ್ಪ, ರಾಜಸ್ಥಾನದ ಭಾರತೀಯ ಭೂ ಸೇನಾ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಎರಡು ವರ್ಷಗಳ ಹಿಂದೆಷ್ಟೆ ಕರಿಸಿದ್ದಪ್ಪ ವಿದ್ಯಾಶ್ರೀಯನ್ನು ಪ್ರೀತಿಸಿ ಮದುವೆಯಾಗಿದ್ದ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.