ADVERTISEMENT

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಜಗಳ, ಚಾಕುವಿನಿಂದ ಇರಿದು ಯೋಧನ ಕೊಲೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 5:43 IST
Last Updated 13 ಆಗಸ್ಟ್ 2022, 5:43 IST
ಕರಿಸಿದ್ದಪ್ಪ 
ಕರಿಸಿದ್ದಪ್ಪ    

ಕುಳಗೇರಿ ಕ್ರಾಸ್ (ಬಾಗಲಕೋಟೆ ಜಿಲ್ಲೆ):ಯೋಧ ಕರಿಸಿದ್ದಪ್ಪ ಸಣ್ಣಸಿದ್ದಪ್ಪ ಕಳಸದ (25) ತನ್ನ ಪತ್ನಿಯ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದರಿಂದ ಕೋಪಗೊಂಡ ಆಕೆಯ ಸಹೋದರ ಧರೀಗೌಡ ಫಕೀರ ಗೌಡ ಧೂಳಪ್ಪನವರ, ಆತನನ್ನು ಚಾಕುವಿನಿಂದ ಇರಿದು ಗುರುವಾರ ರಾತ್ರಿ ಕೊಲೆ ಮಾಡಿದ್ದಾನೆ.

ಬಾದಾಮಿ ತಾಲ್ಲೂಕಿನ ನೀರಲಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

ನಾಲ್ಕು ದಿನಗಳ ಹಿಂದಷ್ಟೇ ಸ್ವಗ್ರಾಮಕ್ಕೆ ರಜೆ ಮೇಲೆ ಬಂದಿದ್ದಕರಿಸಿದ್ದಪ್ಪ, ರಾಜಸ್ಥಾನದ ಭಾರತೀಯ ಭೂ ಸೇನಾ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಎರಡು ವರ್ಷಗಳ ಹಿಂದೆಷ್ಟೆ ಕರಿಸಿದ್ದಪ್ಪ ವಿದ್ಯಾಶ್ರೀಯನ್ನು ಪ್ರೀತಿಸಿ ಮದುವೆಯಾಗಿದ್ದ ಎನ್ನಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.