ADVERTISEMENT

ಬಾಗಲಕೋಟೆ | ಕಬ್ಬಿಗೆ ದರ: ರಸ್ತೆ‌ ತಡೆ; ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 5:22 IST
Last Updated 12 ನವೆಂಬರ್ 2025, 5:22 IST
   

ಬಾಗಲಕೋಟೆ: ಪ್ರತಿ ಟನ್ ಕಬ್ಬಿಗೆ ₹3,500 ನೀಡಬೇಕು ಎಂದು ಆಗ್ರಹಿಸಿ ಮುಧೋಳ ತಾಲ್ಲೂಕಿನ ವಿವಿಧೆಡೆ ಬುಧವಾರ ಬೆಳಿಗ್ಗೆಯಿಂದಲೇ‌‌ ರಸ್ತೆ ತಡೆ ಆರಂಭಿಸಿದ್ದಾರೆ.

ಮುಧೋಳ, ಶಿರೋಳ ಕ್ರಾಸ್, ಸೊರಗಾವಿ, ಕಸಬಾ ಜಂಬಗಿ, ಚಿಚಖಂಡಿ ರಸ್ತೆಯಲ್ಲಿ ವಾಹನ ಸಂಚಾರ ತಡೆದು, ಪ್ರತಿಭಟನೆ ಮಾಡಲಾಗುತ್ತಿದೆ.

ಕಸಬಾ ಜಂಬಗಿಯಲ್ಲಿ ರಸ್ತೆಯಲ್ಲಿ ಅಡುಗೆ ಮಾಡಲಾಗುತ್ತಿದೆ. ವಾಹನಗಳ ಸಂಚಾರ ತಡೆದಿರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ADVERTISEMENT

ವಿಜಯಪುರ- ಮುಧೋಳ, ಜಮಖಂಡಿ- ಲೋಕಾಪುರ ಸೇರಿದಂತೆ ವಿವಿಧ ರಸ್ತೆ ಬಂದ್ ಮಾಡಲಾಗಿದೆ.

ಕಚೇರಿ, ಶಾಲಾ-ಕಾಲೇಜು, ಆಸ್ಪತ್ರೆಗ್ರಳಿಗೆ ತೆರಳುತ್ತಿದ್ದವರು ರಸ್ತೆಯಲ್ಲಿಯೇ ನಿಲ್ಲುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.