ADVERTISEMENT

ದೇವೇಗೌಡರ ನೆರವು ಕೇಳುವ ಬದಲು ಚುನಾವಣೆಗೆ ಹೋಗಿ: ಸಿಎಂಗೆ ಆರ್.ಬಿ.ತಿಮ್ಮಾಪುರ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 7:13 IST
Last Updated 2 ಆಗಸ್ಟ್ 2021, 7:13 IST
ಆರ್.ಬಿ.ತಿಮ್ಮಾಪುರ
ಆರ್.ಬಿ.ತಿಮ್ಮಾಪುರ    

ಬಾಗಲಕೋಟೆ: ಬಸವರಾಜ ಬೊಮ್ಮಾಯಿ ಅವರದ್ದು ಅತಂತ್ರ ಸರ್ಕಾರ. ದೇವೇಗೌಡರ ನೆರವು ಕೋರುವ ಬದಲು ಬಿಜೆಪಿಯವರು ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗುವುದು ಸೂಕ್ತ ಎಂದು ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಬದಲಾದರೂ ಭ್ರಷ್ಟಾಚಾರದ ವಾಸನೆಯಿಂದ ಈ ಸರ್ಕಾರ ಮುಕ್ತವಾಗುವುದಿಲ್ಲ‌ ಅದೇನಿದ್ದರೂ ಹಳೆಯ ಬಾಟಲಿಯಲ್ಲಿ ಹೊಸ ಮದ್ಯ ಹಾಕಿದಂತಾಗಿದೆ ಎಂದರು.

ನಾಲ್ಕಾರು ಗುಂಪುಗಳಿಂದ ಕೂಡಿರುವ ಈ ಸರ್ಕಾರಕ್ಕೆ ಬಹಳ ದಿನ ಭವಿಷ್ಯವೂ ಇಲ್ಲ. ಅತಂತ್ರ ಸರ್ಕಾರಕ್ಕೆ ಒಳ್ಳೆಯ ಆಡಳಿತ ಕೊಡಲು ಆಗುವುದಿಲ್ಲ. ಹೀಗಾಗಿ ಚುನಾವಣೆಗೆ ಹೋಗುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.