ADVERTISEMENT

ರಸ್ತೆ ಅಪಘಾತ : ಕಾಂಗ್ರೆಸ್‌ ಮುಖಂಡ ಮೃತ

​ಪ್ರಜಾವಾಣಿ ವಾರ್ತೆ
Published 29 ಮೇ 2023, 13:33 IST
Last Updated 29 ಮೇ 2023, 13:33 IST
ಚನ್ನವೀರಪ್ಪಗೌಡ ಪಾಗದ
ಚನ್ನವೀರಪ್ಪಗೌಡ ಪಾಗದ   

ಇಳಕಲ್: ಸಮೀಪದ ತುಂಬ ಕ್ರಾಸ್ ಬಳಿ ರಾಜ್ಯ ಹೆದ್ದಾರಿ 20ರ ಮೇಲೆ ಸೋಮವಾರ ನಡೆದ ಕಾರು ಮತ್ತು ಲಾರಿ ನಡುವಿನ ಅಪಘಾತದಲ್ಲಿ ಒಬ್ಬರು ಮೃತಪಟ್ಟ ಘಟನೆ ನಡೆದಿದೆ.

ಅಪಘಾತದಲ್ಲಿ ಲಿಂಗಸಗೂರು ತಾಲ್ಲೂಕು ಆದಾಪೂರ ಗ್ರಾಮದ ಗ್ರಾನೈಟ್ ಉದ್ಯಮಿ ಚನ್ನವೀರಪ್ಪಗೌಡ.ವಿ.ಪಾಗದ (65) ಮೃತಪಟ್ಟಿದ್ದಾರೆ.

ಚನ್ನವೀರಪ್ಪಗೌಡ ಲಿಂಗಸಗೂರು ಕೃಷಿ ಮಾರುಕಟ್ಟೆ ಸಮಿತಿ ಹಾಗೂ ತಾಲ್ಲೂಕು ಪಂಚಾಯ್ತಿಯ ಮಾಜಿ ಅಧ್ಯಕ್ಷರು ಹಾಗೂ ಲಿಂಗಸಗೂರು ಬ್ಲಾಕ್‌ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರು ಆಗಿದ್ದಾರೆ.

ADVERTISEMENT

ಇಳಕಲ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಳಕಲ್‌ ಸಮೀಪ ತುಂಬ ಕ್ರಾಸ್‌ ಬಳಿ ಕಾರು ಲಾರಿ ನಡುವಿನ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.