ಬಾಗಲಕೋಟೆ: ನಿರ್ಜನ ಪ್ರದೇಶದಲ್ಲಿ ಹೊಂಚು ಹಾಕಿ ದಾರಿಹೋಕರನ್ನು ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮುಧೋಳದ ಜಯನಗರದ ಕರೆಪ್ಪ ತಳವಾರ ಹುಣಶಿಕಟ್ಟಿ ಹಾಗೂ ಜಮಖಂಡಿ ತಾಲ್ಲೂಕು ಹೆಬ್ಬಾಳ ಕ್ರಾಸ್ನ ಸದಾಶಿವ ಹಣಮಂತ ಬಂಡಿಗಣಿ ಬಂಧಿತ ಆರೋಪಿಗಳು.
ಜಮಖಂಡಿ, ಹುನ್ನೂರ, ಇಟ್ನಾಳದಲ್ಲಿ ದಾರಿಹೋಕರನ್ನು ಸುಲಿಗೆ ಮಾಡಿ ಚಿನ್ನಾಭರಣ ಹಾಗೂ ನಗದು ದೋಚಿದ್ದರು. ಆರೋಪಿಗಳ ವಿರುದ್ಧ ಜಮಖಂಡಿ ಶಹರ ಠಾಣೆಯಲ್ಲಿ ಎರಡು ಹಾಗೂ ಗ್ರಾಮೀಣ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿದ್ದವು.
ಜಮಖಂಡಿ ಸಿಪಿಐ ಡಿ.ಕೆ.ಪಾಟೀಲ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.