ADVERTISEMENT

ಕಳ್ಳಬಟ್ಟಿ ಪ್ರಕರಣ: ಒಂದು ವರ್ಷ ಶಿಕ್ಷೆ, ₹10 ಸಾವಿರ ದಂಡ 

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2023, 16:23 IST
Last Updated 18 ಆಗಸ್ಟ್ 2023, 16:23 IST
ತಹಶೀಲ್ದಾರ್‌ಗೆ ₹ 15 ಸಾವಿರ ದಂಡ
ತಹಶೀಲ್ದಾರ್‌ಗೆ ₹ 15 ಸಾವಿರ ದಂಡ   

ಬಾಗಲಕೋಟೆ: ಕಳ್ಳಬಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾದಾಮಿ ತಾಲ್ಲೂಕಿನ ಕೆಂದೂರ ತಾಂಡಾದ ಸುನೀಲ್ ಲಮಾಣಿ, ಪೋಮಸಿಂಗ್ ಚವಾಣ, ಕಮಲವ್ವ ಲಮಾಣಿ ಅವರಿಗೆ ಬಾದಾಮಿ ನ್ಯಾಯಾಲಯ ಒಂದು ವರ್ಷ ಕಠಿಣ ಶಿಕ್ಷೆ ಮತ್ತು ₹10 ಸಾವಿರ ದಂಡವಿಧಿಸಿ ಆದೇಶಿಸಿದೆ.

ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕ ಪ್ರಭುಗೌಡ ಪಾಟೀಲ ಪ್ರಕರಣ ದಾಖಲಿಸಿದ್ದರು. ಅಬಕಾರಿ ಉಪ ನಿರೀಕ್ಷಕ ಶಿವರಾಜ ಎಸ್, ಪ್ರಕರಣಗಳ ಸಂಪೂರ್ಣ ತನಿಖೆಯನ್ನು ನಡೆಸಿ ಅಂತಿಮ ದೋಷಾರೊಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT