ಮುಧೋಳ: ಬೇರೆ ಬೇರೆ ಜಾತಿಯ ಕಾರಣ ಮನೆಯವರು ಮದುವೆಗೆ ಒಪ್ಪುವುದಿಲ್ಲ ಎಂದು ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಶನಿವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಲ್ಲೂಕಿನ ಬರಗಿ ಗ್ರಾಮದ ಆನಂದ ರಾಮಪ್ಪ ಬನಹಟ್ಟಿ (23) ಹಾಗೂ15 ವರ್ಷದ ಬಾಲಕಿ ಮೃತಪಟ್ಟವರು.
ಕೂಲಿ ಕೆಲಸ ಮಾಡುವ ರಾಮಪ್ಪ ಹಾಗೂ ಶಾಲೆ ಕಲಿಯುತ್ತಿದ್ದ ಬಾಲಕಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ತಮ್ಮದು ಜಾತಿ ಬೇರೆಯಾದ ಕಾರಣ ಮದುವೆಗೆ ಮನೆಯವರು ಒಪ್ಪುವುದಿಲ್ಲ ಎಂದು ಭಾವಿಸಿ ಇಲ್ಲಿನ ಬಸವ ನಗರದಲ್ಲಿನ ಆನಂದ ಅವರ ನಿವಾಸದಲ್ಲಿ ಸಂಜೆ ಮನೆಯಲ್ಲಿ ಯಾರೂ ಇಲ್ಲದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮುಧೋಳ ನಗರ ಠಾಣೆಯಲ್ಲಿ ಬಾಲಕಿಯ ತಾಯಿ ದೂರು ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.