ADVERTISEMENT

ಅಕ್ರಮ ಅದಿರು ರಪ್ತು: ಸಿಬಿಐ ನೋಟಿಸ್

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:25 IST
Last Updated 6 ಅಕ್ಟೋಬರ್ 2012, 19:25 IST

ಬಳ್ಳಾರಿ: ಅಕ್ರಮ ಅದಿರು ರಪ್ತು ಹಾಗೂ ಬೇಲೇಕೇರಿ ಬಂದರಿನಲ್ಲಿ ಅದಿರು ನಾಪತ್ತೆ ಪ್ರಕರಣ ತನಿಖೆ ನಡೆಸುತ್ತಿರುವ ಸಿಬಿಐ ಜಿಲ್ಲೆಯ ಅದಿರು ರಪ್ತುದಾರರು, ಟ್ರೇಡರ್‌ಗಳು ಹಾಗೂ ಗಣಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ.

ಜಿಲ್ಲೆಯಲ್ಲಿ 76 ಜನ ರಪ್ತುದಾರರು, 50ಕ್ಕೂ ಅಧಿಕ ಟ್ರೇಡರ್‌ಗಳು ಮತ್ತು ಕೆಲವು ಗಣಿ ಮಾಲೀಕರಿಗೆ ರಿಜಿಸ್ಟರ್ ಅಂಚೆ ಮೂಲಕ ನೋಟಿಸ್ ಕಳುಹಿಸಿರುವ ಸಿಬಿಐ, ಸೋಮವಾರ ಬೆಂಗಳೂರಿನಲ್ಲಿರುವ ಕಚೇರಿಗೆ ವಿಚಾರಣೆಗಾಗಿ ಖುದ್ದು ಹಾಜರಾಗಲು ಸೂಚನೆ ನೀಡಿದೆ. ಗಣಿ ಉದ್ಯಮದಲ್ಲಿ ತೊಡಗಿರುವ ಜಿಲ್ಲೆಯ ಪ್ರಮುಖ ರಾಜಕಾರಣಿಗಳಿಗೂ ನೋಟಿಸ್ ನೀಡಲಾಗಿದೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.