ADVERTISEMENT

ಬಳ್ಳಾರಿ: ದೇವರಿಗಾಗಿ ದೊಣ್ಣೆಯಿಂದ ಹೊಡೆದಾಡುವುದೇ ಆಚರಣೆ! ಇಬ್ಬರು ಭಕ್ತರ ಸಾವು

ಪ್ರಜಾವಾಣಿ ವಿಶೇಷ
Published 3 ಅಕ್ಟೋಬರ್ 2025, 13:40 IST
Last Updated 3 ಅಕ್ಟೋಬರ್ 2025, 13:40 IST

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕು ಗಡಿಭಾಗದಲ್ಲಿರುವ ದೇವರಗಟ್ಟ ಬನ್ನಿ ಉತ್ಸವದಲ್ಲಿ ದೇವರನ್ನು ಕೊಂಡೊಯ್ಯಲು ದೊಣ್ಣೆಗಳಿಂದ ಹೊಡೆದಾಡುವುದೇ ಒಂದು ಆಚರಣೆ.

ದೇವರನ್ನು ಕೊಂಡೊಯ್ಯಲೆಂದು ಗ್ರಾಮಸ್ಥರು ಪೈಪೋಟಿಗೆ ಬಿದ್ದರು. ದೊಣ್ಣೆ, ಕೋಲುಗಳನ್ನು ಹಿಡಿದು ಕಾದಾಡಿದರು. ಈ ವೇಳೆ ಇಬ್ಬರು ಭಕ್ತರು ಸ್ಥಳದಲ್ಲೇ ಸಾವಿಗೀಡಾದರು. 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆದವಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕರ್ನೂಲು ಜಿಲ್ಲೆಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT