ADVERTISEMENT

ಹೊಸಪೇಟೆ: ವಿಜಯ ವಿಠಲ ಮಾರ್ಗದಲ್ಲಿ ಕಮಾನು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 12:36 IST
Last Updated 2 ಫೆಬ್ರುವರಿ 2021, 12:36 IST
ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯದ ಹರೇ ಶಂಕರ ಮಂಟಪ ಪ್ರವೇಶಿಸುವ ಮುನ್ನ ಲೋಹದ ಕಮಾನು ಮಾಡಿದ್ದು, ಭಾರಿ ವಾಹನ ಸಂಚಾರಕ್ಕೆ ತಡೆ ಬಿದ್ದಿದೆ
ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯದ ಹರೇ ಶಂಕರ ಮಂಟಪ ಪ್ರವೇಶಿಸುವ ಮುನ್ನ ಲೋಹದ ಕಮಾನು ಮಾಡಿದ್ದು, ಭಾರಿ ವಾಹನ ಸಂಚಾರಕ್ಕೆ ತಡೆ ಬಿದ್ದಿದೆ   

ಹೊಸಪೇಟೆ: ಭಾರಿ ವಾಹನಗಳ ಸಂಚಾರ ತಡೆಗೆ ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಲೋಹದ ಕಮಾನು ಮಾಡಿದೆ.

ವಿಠಲ ದೇಗುಲ ಮಾರ್ಗದಲ್ಲಿ ಹರೇ ಶಂಕರ ಮಂಟಪ ಬರುತ್ತದೆ. ಬಸ್‌ ಸೇರಿದಂತೆ ಇತರೆ ದೊಡ್ಡ ವಾಹನಗಳು ಸಂಚರಿಸಿದಾಗ ಮಂಟಪಕ್ಕೆ ಧಕ್ಕೆಯಾಗುತ್ತಿತ್ತು. ಇತ್ತೀಚೆಗೆ ಬಸ್ಸೊಂದು ಮಂಟಪದಲ್ಲಿ ಸಿಲುಕಿಕೊಂಡು ಅದಕ್ಕೆ ಧಕ್ಕೆಯಾಗಿತ್ತು. ಪದೇ ಪದೇ ಈ ರೀತಿಯ ಘಟನೆ ಆಗುತ್ತಿದ್ದು, ಅದನ್ನು ತಡೆಯಲು ಮಂಟಪಕ್ಕೂ ಮೊದಲು ಕಮಾನು ಮಾಡಿಸಿದೆ. ಈಗ ದೊಡ್ಡ ವಾಹನಗಳ ಸಂಚಾರಕ್ಕೆ ತಡೆ ಬಿದ್ದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT