ADVERTISEMENT

ಕೋವಿಡ್‌ನಿಂದ 8 ಮಂದಿ ಸಾವು, ಮೃತರ ಸಂಖ್ಯೆ 22ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 8:44 IST
Last Updated 29 ಜೂನ್ 2020, 8:44 IST

ಬಳ್ಳಾರಿ: ಕೋವಿಡ್ ನಿಂದಾಗಿ‌ ಜಿಲ್ಲೆಯಲ್ಲಿ ಎಂಟು ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 22 ಕ್ಕೆ ಏರಿದೆ. ಎಂಟು ಮಂದಿ ಮೃತಪಟ್ಟ ಬಳಿಕ ಅವರ ಗಂಟಲು‌ ದ್ರವದ‌ ಪರೀಕ್ಷೆ‌ ವರದಿ ಬಂದಿದ್ದು ಸೋಂಕು‌ ದೃಢಪಟ್ಟಿದೆ.

ಉಸಿರಾಟದ ಸಮಸ್ಯೆಯಿಂದ ವಿಮ್ಸ್ ಆಸ್ಪತ್ರೆಗೆ ಗೆ ಜೂನ್ 27 ರಂದು ದಾಖಲಾಗಿದ್ದ ಗಂಗಾವತಿಯ ರಂಗಾಪುರ‌ ಕ್ಯಾಂಪ್ ನಿವಾಸಿ ಪುರುಷ (43) ಅಂದೇ ಮೃತಪಟ್ಟಿದ್ದರು.
ಹೊಸಪೇಟೆ ತಾಲ್ಲೂಕಿನ ಧರ್ಮಸಾಗರದ ಪುರುಷ (56) 22 ರಂದು ದಾಖಲಾಗಿ 28 ರಂದು ಮೃತಪಟ್ಟಿದ್ದರು. ಹೊಸಪೇಟೆಯ ಆಜಾದ್ ನಗರದ ಪುರುಷ (66) 27 ರಂದು ದಾಖಲಾಗಿ ಅಂದೇ ಮೃತಪಟ್ಟಿದ್ದರು. ಆದೋನಿ ಮೂಲದ ಮಹಿಳೆ (52) 27ರಂದು ದಾಖಲಾಗಿ 28ರಂದು ಮೃತಪಟ್ಟಿದ್ದರು. ಉಳಿದ ನಾಲ್ವರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು‌ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT