ಕೆರೆಯಲ್ಲಿ ಮುಳುಗಿ ಎತ್ತುಗಳ ಸಾವು
ತೆಕ್ಕಲಕೋಟೆ: ಇಲ್ಲಿನ ಸಿರಿಗೇರಿ ರಸ್ತೆಯ ಹಿರೇ ಅರ್ಲ ಬೆಟ್ಟಗಳ ಬಳಿಯ ಗುಳೆಗೇರಿ ಕೆರೆಯಲ್ಲಿ ಎತ್ತಿನ ಬಂಡಿ ಸಮೇತ ನೀರು ಕುಡಿಯಲು ಹೋದ ಎರಡು ಎತ್ತುಗಳು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಎತ್ತುಗಳು 18ನೇ ವಾರ್ಡ್ ನಿವಾಸಿ ತಳವಾರ ರುದ್ರಪ್ಪ ಇವರಿಗೆ ಸೇರಿದ್ದು, ರೈತನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಎತ್ತುಗಳ ಮೌಲ್ಯ ₹2 ಲಕ್ಷ ಎಂದು ಅಂದಾಜಿಸಲಾಗಿದೆ. ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.