ADVERTISEMENT

ಸಂಡೂರು | ಅದಿರು ಲಾರಿಗಳ ಡಿಕ್ಕಿ; ಸಂಚಾರ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 16:15 IST
Last Updated 27 ಆಗಸ್ಟ್ 2024, 16:15 IST
ಸಂಡೂರಿನ ನಾರಿಹಳ್ಳ ಜಲಾಶಯ ಬಳಿಯ ವ್ಯಾಲಿ ರೆಸಾರ್ಟ್ ಮುಂಭಾಗದಲ್ಲಿ ಅದಿರು ಲಾರಿಗಳ ಮಧ್ಯೆ ಅಪಘಾತ ಸಂಭವಿಸಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು
ಸಂಡೂರಿನ ನಾರಿಹಳ್ಳ ಜಲಾಶಯ ಬಳಿಯ ವ್ಯಾಲಿ ರೆಸಾರ್ಟ್ ಮುಂಭಾಗದಲ್ಲಿ ಅದಿರು ಲಾರಿಗಳ ಮಧ್ಯೆ ಅಪಘಾತ ಸಂಭವಿಸಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು   

ಸಂಡೂರು: ಇಲ್ಲಿನ ತಾರಾನಗರ ಜಲಾಶಯದ ಬಳಿಯ ವ್ಯಾಲಿ ರೆಸಾರ್ಟ್ ಮುಂಭಾಗದಲ್ಲಿ ಮಂಗಳವಾರ ಮಧ್ಯಾಹ್ನ 3.30ರ‌ ಸುಮಾರಿಗೆ ಎರಡು ಅದಿರು ಲಾರಿಗಳು ಡಿಕ್ಕಿಹೊಡೆದುಕೊಂಡ ಪರಿಣಾಮ ಕಿಲೊಮೀಟರ್ ವರೆಗೂ ಸಂಚಾರ ವ್ಯತ್ಯಯ ಉಂಟಾಯಿತು.

112 ಸಿಬ್ಬಂದಿ ಹಾಗೂ ಪೊಲೀಸರು ಲಾರಿಗಳನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

‘ಅಪಘಾತ ಸಂಭವಿಸಿದ ನಂತರ ಎರಡೂ ಲಾರಿಯ ಚಾಲಕರು ಮತ್ತು ಸಹಾಯಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಇವು ಸುಶೀಲಾನಗರ ಮತ್ತು ಬಳ್ಳಾರಿಯ ನಿವಾಸಿಗಳ ಲಾರಿಗಳೆಂದು ತಿಳಿದು ಬಂದಿದೆ. ಮಾಲೀಕರ ಖಚಿತ ಮಾಹಿತಿ ದೊರೆತ ನಂತರ ಕ್ರಮವಹಿಸಲಾಗುವುದು’ ಎಂದು ಸಂಡೂರು ಪಿಎಸ್‌ಐ ವೀರೇಶ್ ಮಾಳಶೆಟ್ಟಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.