ADVERTISEMENT

ಬಳ್ಳಾರಿ ಜಿಲ್ಲೆಯಾದ್ಯಂತ ಸತತ ಮಳೆ: ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 10:03 IST
Last Updated 13 ಸೆಪ್ಟೆಂಬರ್ 2020, 10:03 IST
ಹೊಸಪೇಟೆಯ ಹಂಪಿ ರಸ್ತೆಯಲ್ಲಿ ಭಾನುವಾರ ಮಳೆಯಲ್ಲೇ ರೈತನೊಬ್ಬ ಚಕ್ಕಡಿ ಓಡಿಸಿಕೊಂಡು ಹೋದ
ಹೊಸಪೇಟೆಯ ಹಂಪಿ ರಸ್ತೆಯಲ್ಲಿ ಭಾನುವಾರ ಮಳೆಯಲ್ಲೇ ರೈತನೊಬ್ಬ ಚಕ್ಕಡಿ ಓಡಿಸಿಕೊಂಡು ಹೋದ   
""

ಹೊಸಪೇಟೆ: ಬಳ್ಳಾರಿ ಜಿಲ್ಲೆಯಾದ್ಯಂತ ರಾತ್ರಿಯಿಡೀ ಸುರಿದ ಜಿಟಿಜಿಟಿ ಮಳೆ ಭಾನುವಾರವೂ ಮುಂದುವರೆದಿದೆ.

ಶನಿವಾರ ಸಂಜೆ ಜಿಟಿಜಿಟಿ ಮಳೆ ಆರಂಭಗೊಂಡಿತು. ರಾತ್ರಿಯಿಡೀ ಎಡೆಬಿಡದೆ ಸುರಿಯಿತು. ಭಾನುವಾರ ನಸುಕಿನ ಜಾವ ಕೆಲ ಸಮಯ ಬಿಡುವು ಕೊಟ್ಟ ಮಳೆ ಮತ್ತೆ ಶುರುವಾಯಿತು. ಪುನಃ ಮಧ್ಯಾಹ್ನ ಒಂದರಿಂದ ಎರಡು ಗಂಟೆಯ ವರೆಗೆ ಬಿಡುವು ಕೊಟ್ಟಿತ್ತು. ಬಳಿಕ ಮತ್ತೆ ತುಂತುರು ಮಳೆ ಆರಂಭಗೊಂಡಿದೆ.

ಸತತ ಮಳೆಯಿಂದ ವಾತಾವರಣ ಸಂಪೂರ್ಣ ತಂಪಾಗಿದೆ. ದಟ್ಟ ಕಾರ್ಮೋಡಗಳು ಆವರಿಸಿಕೊಂಡಿವೆ. ಕಂಪ್ಲಿಯಲ್ಲಿ ಅತಿ ಹೆಚ್ಚು 72 ಮಿ.ಮೀ. ಮಳೆಯಾದರೆ, ಹರಪನಹಳ್ಳಿಯಲ್ಲಿ 11.4 ಮಿ.ಮೀ. ಅತಿ ಕಡಿಮೆ ಮಳೆಯಾಗಿದೆ. ಕೂಡ್ಲಿಗಿ, ಸಂಡೂರು, ಸಿರುಗುಪ್ಪ, ಬಳ್ಳಾರಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಸೇರಿದಂತೆ ಎಲ್ಲೆಡೆ ಉತ್ತಮ ಮಳೆಯಾಗಿದೆ.

ADVERTISEMENT

ಭಾನುವಾರ ರಜಾ ದಿನ, ಮೇಲಿಂದ ಮಳೆಯಾಗಿದ್ದರಿಂದ ಹೆಚ್ಚಿನವರು ಮನೆಯಿಂದ ಹೊರಗೆ ಬರಲಿಲ್ಲ. ನಗರದ ಬಹುತೇಕ ರಸ್ತೆಗಳು ನಿರ್ಜನವಾಗಿದ್ದವು.

ಮಂಜು ಹೊದ್ದುಕೊಂಡಿರುವ ಹೊಸಪೇಟೆ ನಗರ, ಜೋಳದರಾಶಿ ಗುಡ್ಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.