ಹೊಸಪೇಟೆ: ಅನಾರೋಗ್ಯದಿಂದ ನಿಧನ ಹೊಂದಿದ ತಾಲ್ಲೂಕಿನ ಕಡ್ಡಿರಾಂಪುರದ ಕರಿಯಮ್ಮ (93) ಅವರ ಎರಡು ಕಣ್ಣುಗಳನ್ನು ಬಳ್ಳಾರಿಯ ನಿತ್ಯಜ್ಯೋತಿ ವಿಮ್ಸ್ ನೇತ್ರ ಭಂಡಾರಕ್ಕೆ ಬುಧವಾರ ದಾನ ಮಾಡಲಾಗಿದೆ.
‘ಕರಿಯಮ್ಮ ಅವರ ಎರಡು ಕಣ್ಣುಗಳು ಆರೋಗ್ಯವಾಗಿವೆ. ಅವರ ಕಣ್ಣುಗಳಿಂದ ಬೇರೆಯವರ ಬದುಕಿನಲ್ಲಿ ಬೆಳಕು ಮೂಡುತ್ತದೆ. ಕರಿಯಮ್ಮ ಅವರು ಮೃತಪಟ್ಟ ನಂತರ ಕುಟುಂಬದವರು ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿ ಒಳ್ಳೆಯ ಕೆಲಸ ಮಾಡಿದ್ದಾರೆ’ ಎಂದು ನೇತ್ರ ಭಂಡಾರದ ನಿರ್ದೇಶಕರು ತಿಳಿಸಿದ್ದಾರೆ.
ನೋವಿನಲ್ಲೂ ಅಜ್ಜಿಯ ಕಣ್ಣುಗಳನ್ನು ದಾನ ಮಾಡಿ, ಕುಟುಂಬ ಸಾರ್ಥಕತೆ ಮೆರೆದಿದೆ. ಏಳು ತಿಂಗಳ ಹಿಂದೆ ಮನೆಯಲ್ಲಿ ನಡೆದ ಮದುವೆ ಸಮಾರಂಭದ ದಿನ ಕುರುಬರ ಕೊಟ್ರಬಸಪ್ಪ ಅವರ ಇಡೀ ಕುಟುಂಬ ಸದಸ್ಯರು, ಸತ್ತ ನಂತರ ಕಣ್ಣುಗಳನ್ನು ದಾನ ಮಾಡುವ ಪ್ರತಿಜ್ಞೆ ಸ್ವೀಕರಿಸಿ, ನೇತ್ರದಾನಕ್ಕೆ ಸಂಬಂಧಿಸಿದ ಪತ್ರಕ್ಕೆ ಸಹಿ ಹಾಕಿದ್ದರು. ಈಗ ಅಂದುಕೊಂಡಂತೆ ನಡೆದುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.