
ತೆಕ್ಕಲಕೋಟೆ: ಹಾಗಲೂರು ಗ್ರಾಮದಲ್ಲಿ ಸರ್ಕಾರದ ವತಿಯಿಂದ ಕೆಪಿಎಸ್ ಶಾಲೆ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಮಾತನಾಡಿ, 'ಕೆಪಿಎಸ್ ಮ್ಯಾಗ್ನೆಟ್ ಶಾಲೆಯ ಎಚ್.ಹೊಸಳ್ಳಿ ಗ್ರಾಮಕ್ಕೆ ಕಳುಹಿಸಲು ಹಾಗಲೂರು ಗ್ರಾಮದ ಜನರು ವಿರೋಧಿಸಿದ್ದು, ಇಲ್ಲಿ ಬಹುತೇಕ ಜನ ಬಡವರು, ರೈತರು ಇದ್ದು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳನ್ನು ಅವಲಂಬಿಸಿದ್ದಾರೆ ಎಂದು ಹೇಳಿದರು.
'ಕೆಪಿಎಸ್ ಶಾಲೆ ಒಂದು ಕಿಲೋ ಮೀಟರ್ ದೂರದ ಹೆಚ್.ಹೊಸಳ್ಳಿ ಗ್ರಾಮಕ್ಕೆ ಹೋಗಲು ಈ ಸಣ್ಣ ಮಕ್ಕಳಿಗೆ ಸಾಧ್ಯವಿಲ್ಲ, ಆದ್ದರಿಂದ 360ಕ್ಕೂ ಹೆಚ್ಚು ಮಕ್ಕಳು ಇರುವ ಶಾಲೆಯನ್ನು ಮುಚ್ಚಬಾರದು' ಎಂದು ಆಗ್ರಹಿಸಿದರು.
ಎಐಡಿಎಸ್ಓ ಜಿಲ್ಲಾ ಅಧ್ಯಕ್ಷ ಕೆ ಈರಣ್ಣ, ತಾಲ್ಲೂಕು ಸಂಚಾಲಕಿ ಅನುಪಮಾ, ಸದಸ್ಯರಾದ ಹೆಚ್. ಕಾರ್ತಿಕ, ಹಾಗಲೂರಪ್ಪ ಮತ್ತು ಊರಿನ ಗ್ರಾಮಸ್ಥರಾದ ಕಲ್ಲಪ್ಪ, ಮುನಿಸ್ವಾಮಿ, ವಿಶ್ವನಾಥ, ತಿಮ್ಮಯ್ಯ ಮತ್ತು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.