ADVERTISEMENT

ಜಂಬುನಾಥ ರಥೋತ್ಸವ ರದ್ದುತೇರಿಗೆ ಸಾಂಕೇತಿಕ ಪೂಜೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 12:39 IST
Last Updated 25 ಏಪ್ರಿಲ್ 2021, 12:39 IST
ಜಂಬುನಾಥ ಸ್ವಾಮಿಗೆ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿರುವುದು
ಜಂಬುನಾಥ ಸ್ವಾಮಿಗೆ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿರುವುದು   

ಹೊಸಪೇಟೆ (ವಿಜಯನಗರ): ಕೋವಿಡ್‌–19 ಕಾರಣಕ್ಕಾಗಿ ಭಾನುವಾರ ನಗರ ಹೊರವಲಯದ ಜಂಬುನಾಥ ರಥೋತ್ಸವ ರದ್ದುಪಡಿಸಿ, ಸಾಂಕೇತಿಕವಾಗಿ ಪೂಜೆ ನೆರವೇರಿಸಲಾಯಿತು.

ಪ್ರತಿವರ್ಷ ಮಹಾವೀರ ಜಯಂತಿಯ ದಿನ ಜಂಬುನಾಥ ರಥೋತ್ಸವ ನೆರವೇರುತ್ತದೆ. ಈ ವರ್ಷ ಜಂಬುನಾಥ ಸ್ವಾಮಿಗೆ ಅರ್ಚಕರು ವಿಶೇಷ ಪೂಜೆ ನೆರವೇರಿಸಿದರು. ತೇರಿಗೆ ಸಾಂಕೇತಿಕವಾಗಿ ಪೂಜಿಸಿದರು.

ಕರ್ಫ್ಯೂ ಜಾರಿಯಲ್ಲಿರುವುದರಿಂದ ಕೆಲವು ಭಕ್ತರು ನಸುಕಿನ ಜಾವವೇ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.