ಹೊಸಪೇಟೆ (ವಿಜಯನಗರ): ಕೋವಿಡ್–19 ಕಾರಣಕ್ಕಾಗಿ ಭಾನುವಾರ ನಗರ ಹೊರವಲಯದ ಜಂಬುನಾಥ ರಥೋತ್ಸವ ರದ್ದುಪಡಿಸಿ, ಸಾಂಕೇತಿಕವಾಗಿ ಪೂಜೆ ನೆರವೇರಿಸಲಾಯಿತು.
ಪ್ರತಿವರ್ಷ ಮಹಾವೀರ ಜಯಂತಿಯ ದಿನ ಜಂಬುನಾಥ ರಥೋತ್ಸವ ನೆರವೇರುತ್ತದೆ. ಈ ವರ್ಷ ಜಂಬುನಾಥ ಸ್ವಾಮಿಗೆ ಅರ್ಚಕರು ವಿಶೇಷ ಪೂಜೆ ನೆರವೇರಿಸಿದರು. ತೇರಿಗೆ ಸಾಂಕೇತಿಕವಾಗಿ ಪೂಜಿಸಿದರು.
ಕರ್ಫ್ಯೂ ಜಾರಿಯಲ್ಲಿರುವುದರಿಂದ ಕೆಲವು ಭಕ್ತರು ನಸುಕಿನ ಜಾವವೇ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.