ADVERTISEMENT

ಜಿಂದಾಲ್ ನೌಕರರ‌ ಪ್ರವೇಶಕ್ಕೆ ಕುಡುತಿನಿ ನಿವಾಸಿಗಳಿಂದ ತಡೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 5:31 IST
Last Updated 12 ಜೂನ್ 2020, 5:31 IST
ಜಿಂದಾಲ್ ನೌಕರರ ಪ್ರವೇಶಕ್ಕೆ ಕುಡುತಿನಿ ನಿವಾಸಿಗಳ ತಡೆ
ಜಿಂದಾಲ್ ನೌಕರರ ಪ್ರವೇಶಕ್ಕೆ ಕುಡುತಿನಿ ನಿವಾಸಿಗಳ ತಡೆ   

ತೋರಣಗಲ್ಲು (ಸಂಡೂರು ತಾಲ್ಲೂಕು): ಇಲ್ಲಿಗೆ ಸಮೀಪದ ಕುಡುತಿನಿ ಪಟ್ಟಣದ ನಾಗರೀಕರು ಜಿಂದಾಲ್ ನೌಕರರಿಗೆ ಮತ್ತು ಜಿಂದಾಲ್ ವಾಹನಗಳಿಗೆ ಪಟ್ಟಣದ ಒಳಗಡೆ ಪ್ರವೇಶಕ್ಕೆ ಶುಕ್ರವಾರ ಬೆಳಿಗ್ಗೆಯಿಂದ ನಿರ್ಬಂಧ ವಿಧಿಸಿದ್ದಾರೆ. ಜಿಂದಾಲ್ ನಲ್ಲಿ ಕೊರೊನಾ ಸೋಂಕಿತರ‌ ಸಂಖ್ಯೆ‌ ಹೆಚ್ಚಾಗುತ್ತಿರುವುದರಿಂದ ಜನ ಈ ನಿರ್ಧಾರ ಮಾಡಿದ್ದಾರೆ.

ಬೆಳಿಗ್ಗೆಯಿಂದ ನಿವಾಸಿಗಳು ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತುಕೊಂಡು ಜಿಂದಾಲ್ ಸಂಸ್ಥೆಯ ವಾಹನಗಳನ್ನು ತಡೆಯುತ್ತಿದ್ದಾರೆ.

ಜಿಂದಾಲ್ ಸಂಸ್ಥೆಯಲ್ಲಿ ಪ್ರಸ್ತುತ 101 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕರು ಪಟ್ಟಣವನ್ನು ಕೊರೊನ ದಿಂದ ಮುಕ್ತ ಮಾಡಲು ಸ್ವಯಂ ಪ್ರೇರಣೆಯಿಂದ ಮುನ್ನಚ್ಚೆರಿಕೆ ಕ್ರಮವಾಗಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.

ADVERTISEMENT

ಜಿಂದಾಲ್ ಸಂಸ್ಥೆಯು ಸಹ ಇಂದು ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಬಳ್ಳಾರಿ, ಹೊಸಪೇಟೆ ಮತ್ತು ಸಂಡೂರು ಭಾಗದ ಜಿಂದಾಲ್ ನೌಕರರ ಬಸ್ ಗಳ ಸಂಚಾರವನ್ನು ನಿಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.