ADVERTISEMENT

ಹಂಪಿ: ಕುದುರೆ ಮೇಲೆ ಚಿರತೆ ದಾಳಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 15:37 IST
Last Updated 31 ಜನವರಿ 2021, 15:37 IST
ಚಿರತೆ ದಾಳಿಗೆ ಗಾಯಗೊಂಡ ಕುದುರೆ ಮರಿಗೆ ಉಪಚರಿಸುತ್ತಿರುವ ಜನ
ಚಿರತೆ ದಾಳಿಗೆ ಗಾಯಗೊಂಡ ಕುದುರೆ ಮರಿಗೆ ಉಪಚರಿಸುತ್ತಿರುವ ಜನ   

ಹೊಸಪೇಟೆ: ತಾಲ್ಲೂಕಿನ ಹಂಪಿ ವಿಜಯ ವಿಠಲ ದೇವಸ್ಥಾನ ಹಿಂಭಾಗದ ತುಲಾಭಾರ ಸ್ಮಾರಕದ ಬಳಿ ಭಾನುವಾರ ಸಂಜೆ ಚಿರತೆ ದಾಳಿ ನಡೆಸಿದ್ದರಿಂದ ಕುದುರೆ ಮರಿ ಗಂಭೀರವಾಗಿ ಗಾಯಗೊಂಡಿದೆ.

‘ತುಲಾ ಭಾರ ಸ್ಮಾರಕ ಬಳಿ ಕುದುರೆ ಮರಿ ಸುತ್ತಾಡುತ್ತಿತ್ತು. ಅದರ ಮೇಲೆ ಚಿರತೆ ಎರಗಿ ಬಿದ್ದದ್ದರಿಂದ ಕುದುರೆ ಕಿರುಚಾಡಲು ಶುರು ಮಾಡಿದೆ. ಅದನ್ನು ಗಮನಿಸಿದ ಅಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಪ್ರವಾಸಿಗರು ಗುಂಪಾಗಿ ದೌಡಾಯಿಸಿದ್ದಾರೆ. ಜನರನ್ನು ಕಂಡು ಚಿರತೆ ಕಾಲು ಕಿತ್ತಿದೆ. ಗಂಭೀರ ಗಾಯಗೊಂಡ ಕುದುರೆಗೆ ಚಿಕಿತ್ಸೆ ನೀಡಲಾಗಿದೆ’ ಎಂದು ಪ್ರತ್ಯದರ್ಶಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT