ADVERTISEMENT

ಮಹಾಲಯ ಅಮವಾಸ್ಯೆ: ಹಂಪಿ ವಿರೂಪಾಕ್ಷೇಶ್ವರನಿಗೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2018, 12:01 IST
Last Updated 8 ಅಕ್ಟೋಬರ್ 2018, 12:01 IST
ಪಿತೃಪಿಂಡ ಪ್ರದಾನಕ್ಕೂ ಮುಂಚೆ ಹಂಪಿ ತುಂಗಭದ್ರಾ ನದಿ ತಟದ ಮಂಟಪದಲ್ಲಿ ಪೂಜೆ ಸಲ್ಲಿಸಲಾಯಿತು
ಪಿತೃಪಿಂಡ ಪ್ರದಾನಕ್ಕೂ ಮುಂಚೆ ಹಂಪಿ ತುಂಗಭದ್ರಾ ನದಿ ತಟದ ಮಂಟಪದಲ್ಲಿ ಪೂಜೆ ಸಲ್ಲಿಸಲಾಯಿತು   

ಹೊಸಪೇಟೆ: ಮಹಾಲಯ ಅಮವಾಸ್ಯೆ ಪ್ರಯುಕ್ತ ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇಗುಲಕ್ಕೆ ಸೋಮವಾರ ಜನ ಭೇಟಿ ನೀಡಿ, ವಿರೂಪಾಕ್ಷೇಶ್ವರನ ದರ್ಶನ ಪಡೆದರು.

ವಿವಿಧ ಕಡೆಗಳಿಂದ ಬಂದಿದ್ದ ಜನ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಹೂ, ಹಣ್ಣು, ಕಾಯಿ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಅಮವಾಸ್ಯೆ ನಿಮಿತ್ತ ವಿರೂಪಾಕ್ಷೇಶ್ವರನಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಕುಂಕುರ್ಮಾಚನೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಲಾಯಿತು. ನಂತರ ಪಂಪಾಂಬಿಕೆ ಮತ್ತು ಭುವನೇಶ್ವರಿ ದೇವಿಗೆ ವಿಶೇಷ ರೀತಿಯಲ್ಲಿ ಅಲಂಕಾರ ಮಾಡಿ, ಪೂಜೆ ಸಲ್ಲಿಸಿದರು.

ಕೆಲವರು ತುಂಗಭದ್ರಾ ನದಿಯಲ್ಲಿ ಪಿತೃಪಿಂಡ ಪ್ರದಾನ ಮಾಡಿದರು. ನಾರಾಯಣ ಬಲಿ, ತ್ರಿಪಿಂಡ, ತಿಲ ದರ್ಪಣ ಪೂಜೆ ನೆರವೇರಿಸಿದರು. ನಂತರ ನದಿಯಲ್ಲಿ ಪಿತೃ ಪಿಂಡ ಅರ್ಪಿಸಿ, ನೀರಿನಲ್ಲಿ ಮಿಂದೆದ್ದು, ವಿರೂಪಾಕ್ಷೇಶ್ವರನ ದರ್ಶನ ಪಡೆದರು.
ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಂದ ಜನ ಪಿತೃಪಿಂಡ ಪ್ರದಾನ ಮಾಡಲು ಬಂದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.