ಕಮಲಾಪುರ: ಹಂದಿ ದಾಳಿಯಿಂದ ರೈತನೊಬ್ಬ ತೀವ್ರ ಗಾಯಗೊಂಡ ಘಟನೆ ತಾಲ್ಲೂಕಿನ ಬೆಳಕೋಟಾ
ಗ್ರಾಮದಲ್ಲಿ ಸೋಮವಾರ ನಡೆದಿದೆ.
ಬಸವರಾಜ ಗುರುಲಿಂಗಪ್ಪ ಕವನಳ್ಳಿ ಗಾಯಗೊಂಡವರು. ಬೆಳಿಗ್ಗೆ ಕಬ್ಬಿಗೆ ನೀರುಣಿಸಲು ತೆರಳಿದ್ದು, ಒಳಗಿನಿಂದ ಬಂದ ಹಂದಿ ದಾಳಿ ಮಾಡಿದೆ. ಕಾಲಿಗೆ ಕಚ್ಚಿ ಗಾಯಗೊಳಿಸಿದೆ. ರಕ್ತಸ್ರಾವವಾಗಿ ಬಸವರಾಜ ನಿತ್ರಾಣ ಸ್ಥಿತಿಗೆ ತಲುಪಿದ್ದರು. ಹಿಂದಿನಿಂದ ಗುದ್ದಿರುವುದರಿಂದ ಸೊಂಟಕ್ಕು ಗಾಯಗಳಾಗಿವೆ. ಕಮಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.