
ಪ್ರಜಾವಾಣಿ ವಾರ್ತೆ
ಸಿರುಗುಪ್ಪ: ಹೊಸ ರೇಷನ್ ಕಾರ್ಡ್ ನೀಡಲು ₹ 4 ಸಾವಿರ ಬೇಡಿಕೆ ಇಟ್ಟ ಆನ್ ಲೈನ್ ಸೆಂಟರ್ ಅವರ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವದಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಆಹಾರ ನಿರೀಕ್ಷಕ ಎಂ.ವಿಜಯಕುಮಾರ್ ಅವರು ಸಿರುಗುಪ್ಪ ಪೊಲೀಸ್ ರಾಣೆಯಲ್ಲಿ ದೂರು ನೀಡಿರುತ್ತಾರೆ.
ಸಿರುಗುಪ್ಪ ನಗರದ ಹಳೆ ಆಂಜನೇಯ ದೇವಸ್ಥಾನದ ಬಳಿ ಇರುವ ಆನ್ಲೈನ್ ಕೇಂದ್ರದ ನಿರ್ವಾಹಕ ರಾಘವೇಂದ್ರ, ಅವರು ಹೊಸ ಪಡಿತರ ಚೀಟಿಗಾಗಿ ₹ 4,000 ಬೇಡಿಕೆ ಇಡುತ್ತಿರುವ ವಿಡಿಯೊ ರಾಜಕೀಯ ಪಕ್ಷವೊಂದರ ಫೇಸ್ಬುಕ್ ಖಾತೆಯಲ್ಲಿ ಡಿ.19ರಂದು ಅಪ್ಲೋಡ್ ಮಾಡಲಾಗಿತ್ತು. ಇದನ್ನು ಆಧರಿಸಿ ದೂರು ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.