ADVERTISEMENT

ಮೋದಿ ಜನ್ಮದಿನ; ಹಂಪಿಯಲ್ಲಿ ಪೂಜೆ, ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 9:02 IST
Last Updated 17 ಸೆಪ್ಟೆಂಬರ್ 2020, 9:02 IST
ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಂಪಿಯಲ್ಲಿ ಗುರುವಾರ ಆಟೊ ಚಾಲಕರು ಹಾಗೂ ವಿರೂಪಾಕ್ಷಿ ಯುವಕರ ತಂಡದವರು ಸ್ವಚ್ಛತಾ ಕಾರ್ಯ ಕೈಗೊಂಡರು.
ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಂಪಿಯಲ್ಲಿ ಗುರುವಾರ ಆಟೊ ಚಾಲಕರು ಹಾಗೂ ವಿರೂಪಾಕ್ಷಿ ಯುವಕರ ತಂಡದವರು ಸ್ವಚ್ಛತಾ ಕಾರ್ಯ ಕೈಗೊಂಡರು.   

ಹೊಸಪೇಟೆ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ತಾಲ್ಲೂಕಿನ ಹಂಪಿಯಲ್ಲಿ ಗುರುವಾರ ಆಟೊ ಚಾಲಕರು ಹಾಗೂ ವಿರೂಪಾಕ್ಷಿ ಯುವಕರ ತಂಡದವರು ಸ್ವಚ್ಛತಾ ಕಾರ್ಯ ಕೈಗೊಂಡರು.

ಅದಕ್ಕೂ ಮುನ್ನ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತೆಂಗಿನಕಾಯಿ, ಹೂವಿನ ವ್ಯಾಪಾರಿಗಳಿಗೆ ಬಟ್ಟೆ ಕೈಚೀಲ ಕೊಟ್ಟು ಪ್ಲಾಸ್ಟಿಕ್‌ ಬಳಸದಂತೆ ಅರಿವು ಮೂಡಿಸಿದರು. ನಂತರ ರಥಬೀದಿ, ವಿರೂಪಾಕ್ಷ ಬಜಾರ್‌ ಹಾಗೂ ವಾಹನ ನಿಲುಗಡೆ ಜಾಗದಲ್ಲಿ ಸ್ವಚ್ಛತಾ ಕಾರ್ಯ ನೆರವೇರಿಸಿದರು.

ಮಾಸ್ಕ್‌, ಸ್ಯಾನಿಟೈಸರ್‌ ವಿತರಣೆ:ಮೋದಿ ಜನ್ಮದಿನದ ಅಂಗವಾಗಿ ‘ಮಿಷನ್‌ ಮೋದಿ ಅಗೇನ್‌ ಪಿ.ಎಂ. ಡೆಮೊಕ್ರಟಿಕ್‌ ಡೆವಲಪ್‌ಮೆಂಟ್‌ ಟ್ರಸ್ಟ್‌’ ಪದಾಧಿಕಾರಿಗಳು ನಗರದ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದ ಅರ್ಚಕರು, ಸಿಬ್ಬಂದಿಗೆ ಮಾಸ್ಕ್‌, ಸ್ಯಾನಿಟೈಸರ್‌ ವಿತರಿಸಿದರು.

ADVERTISEMENT

ಟ್ರಸ್ಟ್‌ ರಾಜ್ಯ ಘಟಕದ ಉಪಾಧ್ಯಕ್ಷ ಪ್ರಲ್ಹಾದ್ ಭೂಪಾಳ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ವ್ಯಾಸರಾಜ್ ಜೋಷಿ, ಜಿಲ್ಲಾ ಅಧ್ಯಕ್ಷ ವಿನಾಯಕ ಸ್ವಾಮಿ, ಯುವ ಘಟಕದ ಜಿಲ್ಲಾ ಅಧ್ಯಕ್ಷ ಕಿಚಿಡಿ ಕೊಟ್ರೇಶ್, ಹೊಸಪೇಟೆ ತಾಲ್ಲೂಕು ಅಧ್ಯಕ್ಷ ಅಕ್ಕಿ ಬಸವರಾಜ್, ಪಿ.ಸಂದೀಪ್ ನಾಯ್ಡು, ಸೂರಿ ಬಂಗಾರು, ರಾಮಾಂಜನೇಯಲು, ಇಮ್ರಾನ್, ಮೌಲಾ ಹುಸೇನ್, ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ್ ಆಚಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.