ADVERTISEMENT

ವಾಜಪೇಯಿ ಉದ್ಯಾನಕ್ಕೆ ಬಂದ ಬಿಳಿ ಹುಲಿ, ತೋಳ

ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತಿರುವ ‘ಅರ್ಜುನ್‌’

ಶಶಿಕಾಂತ್ ಎಸ್. ಶೆಂಬೆಳ್ಳಿ
Published 26 ಆಗಸ್ಟ್ 2020, 21:47 IST
Last Updated 26 ಆಗಸ್ಟ್ 2020, 21:47 IST
ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಬಂದಿರುವ ಬಿಳಿ ಹುಲಿ
ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಬಂದಿರುವ ಬಿಳಿ ಹುಲಿ   

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಸಮೀಪದ ಬಿಳಿಕಲ್‌ ಸಂರಕ್ಷಿತಾರಣ್ಯದ ಮಡಿಲಲ್ಲಿ ಇರುವ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಬಿಳಿ ಹುಲಿ, ತೋಳ ತರಲಾಗಿದೆ.

ಮೈಸೂರು ಮೃಗಾಲಯದಿಂದ ವಾರದ ಹಿಂದೆ ಈ ಅತಿಥಿಗಳನ್ನು ಇಲ್ಲಿಗೆ ಬರಮಾಡಿಕೊಳ್ಳಲಾಗಿದೆ. ಬಿಳಿ ಹುಲಿಯ ಹೆಸರು ಅರ್ಜುನ್‌. ಕಪ್ಪುಪಟ್ಟಿ ಹೊಂದಿರುವ ಈ ಬಿಳಿಹುಲಿಗೆ ಈಗ 7 ವರ್ಷ. ಒಟ್ಟು ಏಳು ತೋಳಗಳನ್ನು ತರಲಾಗಿದೆ.‘ರಾಜ್ಯದಲ್ಲಿ ಮೈಸೂರು ಮೃಗಾಲಯ ಬಿಟ್ಟರೆ ಬೇರೆಲ್ಲೂ ಬಿಳಿಹುಲಿ ಇಲ್ಲ. ಇವುಗಳ ಜೊತೆ ತೋಳಗಳು ಬಂದಿರುವುದರಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗಲಿದೆ’ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎನ್‌. ಕಿರಣ್‌ ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT