ADVERTISEMENT

ಮಾನಸ ಸರೋವರಕ್ಕೆ ವಿದ್ಯಾರಣ್ಯ ಶ್ರೀ

​ಪ್ರಜಾವಾಣಿ ವಾರ್ತೆ
Published 27 ಜೂನ್ 2018, 12:41 IST
Last Updated 27 ಜೂನ್ 2018, 12:41 IST
ಮಾನಸ ಸರೋವರದಲ್ಲಿ ಹಮ್ಮಿಕೊಂಡಿದ್ದ ಹೋಮ ಕಾರ್ಯಕ್ರಮದಲ್ಲಿ ಹಂಪಿಯ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಪಾಲ್ಗೊಂಡಿರುವುದು
ಮಾನಸ ಸರೋವರದಲ್ಲಿ ಹಮ್ಮಿಕೊಂಡಿದ್ದ ಹೋಮ ಕಾರ್ಯಕ್ರಮದಲ್ಲಿ ಹಂಪಿಯ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಪಾಲ್ಗೊಂಡಿರುವುದು   

ಹೊಸಪೇಟೆ: ಹಂಪಿ ವಿದ್ಯಾರಣ್ಯ ಮಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ಮಾನಸ ಸರೋವರ ಪ್ರಯಾಣ ಬೆಳೆಸಿದ್ದಾರೆ.

ಕಳೆದ 19 ವರ್ಷಗಳಿಂದ ಸತತವಾಗಿ ಸ್ವಾಮೀಜಿ ಅವರು ಮಾನಸ ಸರೋವರಕ್ಕೆ ತೆರಳುತ್ತಿದ್ದಾರೆ. ಇತ್ತೀಚೆಗೆ ಹಂಪಿಯಿಂದ ಪ್ರಯಾಣ ಬೆಳೆಸಿರುವ ಅವರು ಬುಧವಾರ ಮಾನಸ ಸರೋವರಕ್ಕೆ ತಲುಪಿದ್ದು, ಅಲ್ಲಿ ವಿಶೇಷ ಪೂಜೆ, ಹೋಮ ಹವನ ಮಾಡಿದರು. ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡಿದರು.

ಒಟ್ಟು 16 ದಿನದ ಅವರ ಪ್ರವಾಸದಲ್ಲಿ ಅವರೊಂದಿಗೆ 59 ಜನ ಮಠದ ಭಕ್ತರು ಕೂಡ ತೆರಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.