ADVERTISEMENT

ಮನೆ ಬೀಗ ಮುರಿದು ₹ 2 ಲಕ್ಷ ನಗದು, ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 2:34 IST
Last Updated 10 ಆಗಸ್ಟ್ 2021, 2:34 IST
ವಿಜಯಪುರದ ಜಿ.ಎಂ. ಸರ್ಕಲ್‌ನಲ್ಲಿರುವ ಮನೆಯೊಂದರಲ್ಲಿ ಬೀರುವಿನ ಬೀಗ ಮುರಿದು ಕಳವು ಮಾಡಿರುವುದು
ವಿಜಯಪುರದ ಜಿ.ಎಂ. ಸರ್ಕಲ್‌ನಲ್ಲಿರುವ ಮನೆಯೊಂದರಲ್ಲಿ ಬೀರುವಿನ ಬೀಗ ಮುರಿದು ಕಳವು ಮಾಡಿರುವುದು   

ವಿಜಯಪುರ: ಪಟ್ಟಣದ ಜಿ.ಎಂ. ಸರ್ಕಲ್‌ನಲ್ಲಿ ವಾಸವಾಗಿರುವ ಶೌಕದ್ ಬಾಬು ಅವರ ಮನೆಯಲ್ಲಿನ ಬೀರುವಿನ ಬೀಗ ಮುರಿದು ₹ 2 ಲಕ್ಷ ನಗದು ಹಾಗೂ ಚಿನ್ನಾಭರಣ ದೋಚಲಾಗಿದೆ.

ಬೆಂಗಳೂರಿಗೆ ಕುಟುಂಬ ಸಮೇತರಾಗಿ ಅವರು ಮದುವೆಗೆ ಹೋಗಿದ್ದ ಸಂದರ್ಭದಲ್ಲಿ ಕಳವು ಮಾಡಲಾಗಿದೆ. ಮದುವೆ ಮುಗಿಸಿಕೊಂಡು ವಾಪಸ್‌ ಬಂದು ನೋಡಿದಾಗ ಬೀರುವಿನ ಬೀಗ ಮುರಿದು ಕಳವು ಮಾಡಿರುವುದು ಕಂಡುಬಂದಿದೆ.

ಈ ಸಂಬಂಧ ಪಟ್ಟಣದ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.