ವಿಜಯಪುರ (ಬೆಂ.ಗ್ರಾಮಾಂತರ): ಹೋಬಳಿಯ ಹಾರೋಹಳ್ಳಿ ರೈತ ರಘುನಂದನ್ ಎಂಬುವರಿಗೆ ಸೇರಿದ ದ್ರಾಕ್ಷಿ ತೋಟದಲ್ಲಿನ 52 ಗಿಡಗಳನ್ನು ಸೋಮವಾರ ದುಷ್ಕರ್ಮಿಗಳು ಕತ್ತರಿಸಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಗ್ರಾಮದಲ್ಲಿ ಇತ್ತೀಚೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಜಮೀನು ಒತ್ತುವರಿ ಕಾರ್ಯಾಚರಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂತಹ ದುಷ್ಕೃತ್ಯ ನಡೆಸಿರಬಹುದೆಂದು ಶಂಕಿಸಿ ಅವರು ಇಲ್ಲಿನ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ರಘುನಂದನ್ ಮಾತನಾಡಿ, ‘ನಾವು ದ್ರಾಕ್ಷಿ ಗಿಡಗಳನ್ನು ನಾಲ್ಕು ವರ್ಷದಿಂದ ಮಕ್ಕಳಂತೆ ಪೋಷಿಸಿದ್ದೆವು. ಪ್ರಾಕೃತಿಕ ವಿಕೋಪದ ನಡುವೆಯೂ ಸಾಲ ಮಾಡಿ ಬೆಳೆಯನ್ನು ರೋಗಗಳಿಂದ ಕಾಪಾಡಿಕೊಂಡು ಬಂದಿದ್ದೆವು. ಇನ್ನೂ 20 ವರ್ಷ ಕಾಲ ಫಸಲು ಕೊಡುತ್ತಿದ್ದವು. ಗಿಡಗಳು ಫ್ರೂನಿಂಗ್ ಮಾಡಬೇಕಾಗಿತ್ತು. ಅಷ್ಟರಲ್ಲಿ ಕತ್ತರಿಸಿದ್ದಾರೆ. ಸುಮಾರು ₹ 5 ಲಕ್ಷ ನಷ್ಟವಾಗಿದೆ’ ಎಂದು
ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.