ADVERTISEMENT

ವಿಜಯಪುರ: ವಿದ್ಯುತ್ ಕಂಬ ತೆರವಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಮೇ 2023, 14:17 IST
Last Updated 23 ಮೇ 2023, 14:17 IST
ವಿಜಯಪುರ ಪಟ್ಟಣದಲ್ಲಿ ಅಶೋಕ ನಗರದಲ್ಲಿ ಕಬ್ಬಿಣದ ವಿದ್ಯುತ್ ಕಂಬದಿಂದ ವಿದ್ಯುತ್ ತಂತಿಗಳ ಸಂಪರ್ಕ ಪಡೆದುಕೊಂಡಿರುವುದು
ವಿಜಯಪುರ ಪಟ್ಟಣದಲ್ಲಿ ಅಶೋಕ ನಗರದಲ್ಲಿ ಕಬ್ಬಿಣದ ವಿದ್ಯುತ್ ಕಂಬದಿಂದ ವಿದ್ಯುತ್ ತಂತಿಗಳ ಸಂಪರ್ಕ ಪಡೆದುಕೊಂಡಿರುವುದು   

ವಿಜಯಪುರ(ದೇವನಹಳ್ಳಿ) ಜನವಸತಿ ಪ್ರದೇಶ ಸೇರಿದಂತೆ ತೋಟಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಬ್ಬಿಣದ ವಿದ್ಯುತ್‌ ಕಂಬಗಳಿದ್ದು, ಅವುಗಳನ್ನು ತೆರವುಗೊಳಿಸುವಂತೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಎಲ್ಲೆಂದರಲ್ಲೆ ಸಿಮೆಂಟ್‌ ಕಂಬಗಳಿದ್ದು, ಈ ಹಿಂದೆ ಮಳೆ ಬಿದ್ದಾಗ ಈ ಕಂಬಗಳಲ್ಲಿ ವಿದ್ಯುತ್‌ ಹರಿದು ಪ್ರಾಣಾಪಾಯ ಸಂಭವಿಸಿದೆ. ಹಾಗಾಗಿ ಕಬ್ಬಿಣದ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಿ, ಸಿಮೆಂಟ್‌ ಕಂಬಗಳನ್ನು ಹಾಕಿ ಜನರನ್ನು ಭಯದಿಂದ ಹೊರತರಬೇಕೆಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT