ADVERTISEMENT

ದೇವನಹಳ್ಳಿ | ವಿಮಾನ ನಿಲ್ದಾಣ ಸಿಬ್ಬಂದಿ ಕೊಲೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 0:37 IST
Last Updated 29 ಆಗಸ್ಟ್ 2024, 0:37 IST
ರಾಮಕೃಷ್ಣ
ರಾಮಕೃಷ್ಣ   

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಯನ್ನು ಬುಧವಾರ ಸಂಜೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಪುರುವಾರ ಗ್ರಾಮದ ರಾಮಕೃಷ್ಣ (45) ಕೊಲೆಯಾದವರು.

ಎಂಜಿಎಸ್ ಸೆಕ್ಯೂರಿಟಿ ಗಾರ್ಡ್ ಕಂಪನಿಯಿಂದ ವಿಮಾನ ನಿಲ್ದಾಣದ ಟರ್ಮಿನಲ್–1ರಲ್ಲಿ ಟ್ರಾಲಿ ತಳ್ಳುವ ಕೆಲಸಕ್ಕೆ ರಾಮಕೃಷ್ಣ ನಿಯುಕ್ತಗೊಂಡ ಬಳಿಕ ಸಮೀಪದ ಶೆಟ್ಟಿಗೆರೆಯಲ್ಲಿ ವಾಸವಿದ್ದರು.

ADVERTISEMENT

ಇದೇ ಗ್ರಾಮದ ರಮೇಶ್ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ರಾಮಕೃಷ್ಣ ಅವರನ್ನು ಕೊಲೆ ಮಾಡಿದ್ದು, ಆರೋಪಿಯನ್ನು ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.