ADVERTISEMENT

ದೇವನಹಳ್ಳಿ: ಬೈಪಾಸ್ ರಸ್ತೆಯಲ್ಲಿ ವಾಹನ ದಟ್ಟಣೆ

ವಾಹನ ಸವಾರರು, ಜನರು ಹೈರಾಣ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 19:58 IST
Last Updated 1 ಜನವರಿ 2026, 19:58 IST
ಹೊಸ ವರ್ಷದ ಸಂಚಾರ ಹೆಚ್ಚಳದಿಂದ ದೇವನಹಳ್ಳಿ ಬೈಪಾಸ್ ರಸ್ತೆ ರಾಣಿ ಸರ್ಕಲ್ ಬಳಿ ಗುರುವಾರ ಉಂಟಾದ ದಟ್ಟಣೆಯಿಂದ ವಾಹನಗಳು ಗಂಟೆಗಳ ಕಾಲ ನಿಂತಿದ್ದ ದೃಶ್ಯ
ಹೊಸ ವರ್ಷದ ಸಂಚಾರ ಹೆಚ್ಚಳದಿಂದ ದೇವನಹಳ್ಳಿ ಬೈಪಾಸ್ ರಸ್ತೆ ರಾಣಿ ಸರ್ಕಲ್ ಬಳಿ ಗುರುವಾರ ಉಂಟಾದ ದಟ್ಟಣೆಯಿಂದ ವಾಹನಗಳು ಗಂಟೆಗಳ ಕಾಲ ನಿಂತಿದ್ದ ದೃಶ್ಯ   

ದೇವನಹಳ್ಳಿ: ಹೊಸ ವರ್ಷದ ಮೊದಲ ದಿನ ದೇವನಹಳ್ಳಿ ಸುತ್ತಮುತ್ತ ಹಾಗೂ ಚಿಕ್ಕಬಳ್ಳಾಪುರ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದರು. ಹೀಗಾಗಿ ಪಟ್ಟಣದ ಬೈಪಾಸ್ ರಸ್ತೆ, ರಾಣಿ ಸರ್ಕಲ್ ಬಳಿ ಗುರುವಾರ ಬೆಳಿಗ್ಗೆಯಿಂದಲೇ ಭಾರಿ ವಾಹನ ದಟ್ಟಣೆ ಉಂಟಾಗಿತ್ತು.

ಎಸ್‌ಟಿಆರ್‌ಆರ್ ರಸ್ತೆ ಮೂಲಕ ಸಂಚರಿಸುತ್ತಿದ್ದ ಲಾರಿಗಳು ಮತ್ತು ಟ್ರಕ್‌ಗಳು ವಿಮಾನ ನಿಲ್ದಾಣ ರಸ್ತೆ ಹಾಗೂ ಹೈದರಾಬಾದ್ ರಸ್ತೆಗೆ ಸಂಪರ್ಕ ಸಾಧಿಸಲು ಗಂಟೆಗಳ ಕಾಲ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ಎನ್‌ಎಚ್‌–7ರಲ್ಲಿರುವ ಸಾಯಿ ಬಾಬಾ ದೇಗುಲಕ್ಕೆ ಭೇಟಿ ನೀಡಿದ ಭಕ್ತರು ಹೆದ್ದಾರಿಯಲ್ಲಿಯೇ ವಾಹನಗಳನ್ನು ನಿಲ್ಲಿಸಿದ್ದರಿಂದ ಆವತಿಯಿಂದ ಇಸ್ರೊ ಗೇಟ್‌ವರೆಗೂ ವಾಹನಗಳ ಸಾಲು ನಿಂತು ಸಂಚಾರ ಸಂಪೂರ್ಣ
ಅಸ್ತವ್ಯಸ್ತಗೊಂಡಿತು.

ADVERTISEMENT

ಹಠಾತ್ ಉಂಟಾದ ವಾಹನ ದಟ್ಟಣೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.