ADVERTISEMENT

ಎಲ್ಲಾ ನೇಕಾರರಿಗೆ ವಿದ್ಯುತ್‌ ಸಬ್ಸಿಡಿ

ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿಯ ಮನವಿಗೆ ಸ್ಪಂದಿಸಿದ ಬೆಸ್ಕಾಂ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 5:04 IST
Last Updated 15 ಮಾರ್ಚ್ 2023, 5:04 IST
ದೊಡ್ಡಬಳ್ಳಾಪುರದ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿಯಿಂದ ಮಂಗಳವಾರ ಬೆಂಗಳೂರಿನಲ್ಲಿ ಬೆಸ್ಕಾಂನ ಜಂಟಿ ಪ್ರಧಾನ ವ್ಯವಸ್ಥಾಪಕ ಪ್ರಕಾಶ್‌ ಅವರಿಗೆ ಮನವಿ ಸಲ್ಲಿಸಲಾಯಿತು
ದೊಡ್ಡಬಳ್ಳಾಪುರದ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿಯಿಂದ ಮಂಗಳವಾರ ಬೆಂಗಳೂರಿನಲ್ಲಿ ಬೆಸ್ಕಾಂನ ಜಂಟಿ ಪ್ರಧಾನ ವ್ಯವಸ್ಥಾಪಕ ಪ್ರಕಾಶ್‌ ಅವರಿಗೆ ಮನವಿ ಸಲ್ಲಿಸಲಾಯಿತು   

ದೊಡ್ಡಬಳ್ಳಾಪುರ: ಜವಳಿ ಇಲಾಖೆಯಿಂದ ನಗರದಲ್ಲಿನ ವಿದ್ಯುತ್‌ ಮಗ್ಗಗಳ ಗಣತಿ ನಡೆದ ಸಂದರ್ಭದಲ್ಲಿ ಸೂಕ್ತ ಮಾಹಿತಿ ನೀಡದ ಹಾಗೂ ಕೆಲವು ತಾಂತ್ರಿಕ ತೊಂದರೆಯಿಂದ ವಿದ್ಯುತ್‌ ಸಬ್ಸಿಡಿ ರದ್ದಾಗಿದ್ದ 1,274 ವಿದ್ಯುತ್‌ ಮಗ್ಗ ಘಟಕಗಳಿಗೆ ಶೀಘ್ರವೇ ಸಬ್ಸಿಡಿ ಹಣ ಬಿಡುಗಡೆ ಮಾಡಲಾಗುವುದು ಎಂದು ಬೆಸ್ಕಾಂನ ಜಂಟಿ ಪ್ರಧಾನ ವ್ಯವಸ್ಥಾಪಕ ಪ್ರಕಾಶ್‌ ಭರವಸೆ ನೀಡಿದ್ದಾರೆ.

ಸಬ್ಸಿಡಿ ಹಣ ಬಿಡುಗಡೆ ಸಂಬಂಧ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿಯಿಂದ ಜಂಟಿ ಪ್ರಧಾನ ವ್ಯವಸ್ಥಾಪಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದ್ದು, ನೆರವಿನ ಭರವಸೆ ಸಿಕ್ಕಿದೆ.

‘ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯಡಿ 20 ಎಚ್‌.ಪಿವರೆಗೆ ವಿದ್ಯುತ್‌ ಸಂಪರ್ಕ ಹೊಂದಿರುವ ಜಿಲ್ಲೆಯ 3,226 ವಿದ್ಯುತ್ ಮಗ್ಗ ಘಟಕಗಳ ನೇಕಾರರು ಗಣತಿ ಸಮೀಕ್ಷೆಯಲ್ಲಿ ಪಾಲ್ಗೊಂಡಿಲ್ಲ ಎಂಬ ಕಾರಣ ನೀಡಿ ಸರ್ಕಾರದ ವಿದ್ಯುತ್‌ ಸಬ್ಸಿಡಿ ರದ್ದುಪಡಿಸಿತ್ತು. 1,274 ವಿದ್ಯುತ್ ಮಗ್ಗ ಘಟಕ, ಮಗ್ಗಗಳ ಪೂರ್ವ ಘಟಕಗಳ ವಿದ್ಯುತ್ ಸಬ್ಸಿಡಿ ರದ್ದಾಗಿತ್ತು. ಈ ದಿನಾಂಕದಿಂದಲೇ ಮತ್ತೆ ಸಬ್ಸಿಡಿ ನೀಡಲು ಒಪ್ಪಿಗೆ ದೊರೆತಿದೆ’ ಸಮಿತಿಯ ತಾಲ್ಲೂಕು ಅಧ್ಯಕ್ಷ ಪಿ.ಎ. ವೆಂಕಟೇಶ್‌
ತಿಳಿಸಿದ್ದಾರೆ.

ADVERTISEMENT

ಜವಳಿ ಇಲಾಖೆಯ ಗಣತಿಯಲ್ಲಿ ಭಾಗವಹಿಸಿ ಅಗತ್ಯ ಮಾಹಿತಿ ನೀಡಲಾಗಿತ್ತು. ಆದರೆ, ತಾಂತ್ರಿಕ ಕಾರಣದ ಹಿನ್ನೆಲೆಯಲ್ಲಿ ಹಲವಾರು ವಿದ್ಯುತ್‌ ಮಗ್ಗ ಘಟಕಗಳಿಗೆ ಸಬ್ಸಿಡಿ ರದ್ದಾಗಿತ್ತು. ಮರು ಸಮೀಕ್ಷೆ ನಡೆಸುವ ಮೂಲಕ ಸಬ್ಸಿಡಿ ಹಣ ಬರುವಂತೆ ನೇಕಾರರ ಹಿತರಕ್ಷಣಾ ಸಮಿತಿಯಿಂದ ಹೋರಾಟ ನಡೆಸಲಾಗಿತ್ತು. ಇದರ ಫಲವಾಗಿ ಮತ್ತೆ ನೇಕಾರರಿಗೆ ಸಬ್ಸಿಡಿ ದೊರೆಯುವಂತಾಗಿದೆ ಎಂದು ತಿಳಿಸಿದ್ದಾರೆ.

ಸಮಿತಿಯ ಕಾರ್ಯದರ್ಶಿ ಅಶೋಕ್‌, ಖಜಾಂಚಿ ಕೆ. ಮಲ್ಲೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.