ಸೂಲಿಬೆಲೆ: ನಂದಗುಡಿ ಹೋಬಳಿಯ ಹಿಂಡಿಗನಾಳ ಗ್ರಾಮದಲ್ಲಿ ನಡೆಯುವ ವಾರದ ಸಂತೆಯಲ್ಲಿ ಯುಗಾದಿಯ ಹೊಸದುಡುಕು ಪ್ರಯುಕ್ತ ಕುರಿ ಮೇಕೆಗಳನ್ನು ಮಾರಾಟ ಮಾಡಲು ವಿವಿಧ ಜಿಲ್ಲೆಗಳಿಂದ ಮತ್ತು ಪಕ್ಕದಆಂಧ್ರಪ್ರದೇಶದಿಂದ ಅನೇಕ ರೈತರು ಬಂದಿದ್ದರು.
ಒಂದು ವರ್ಷದಲ್ಲಿ ಕೊರೊನಾ ತಂದಿಟ್ಟ ಸಂಕಷ್ಟ ಮತ್ತು ಚೇತರಿಕೆಯಾಗದ ಆರ್ಥಿಕ ಪರಿಸ್ಥಿತಿಯಿಂದಾಗಿ ಸಂತೆಯಲ್ಲಿ ಕುರಿ ಮೇಕೆಗಳನ್ನು ಕೊಳ್ಳುವ ವ್ಯಾಪಾರಿಗಳು ವಿರಳವಾಗಿ ಕಂಡರು. ಹೊಸ ವರ್ಷದ ಹೊಸದುಡುಕು ಸಂತೆಯಲ್ಲಿ ಕುರಿ ಮೇಕೆಗಳನ್ನು ಮಾರಾಟ ಮಾಡಲು ವರ್ಷ ಪೂರ್ತಿ ಕಾಯುವ ರೈತರ ಮೊಗದಲ್ಲಿ ನಿರಾಸೆ ಛಾಯೆ ಕಾಣಿಸಿತು.
ನೆರೆಯಆಂಧ್ರಪ್ರದೇಶದಿಂದ ಕುರಿಗಳನ್ನು ಮಾರಲು ತಂದಿದ್ದ ರೈತರೊಬ್ಬರು, ನಿರೀಕ್ಷೆಯ ಬೆಲೆ ದೊರೆಯಲಿಲ್ಲ ಎಂದು ಕುರಿಗಳನ್ನು ಮಾರಾಟ ಮಾಡದೆ, ಬೆಲೆ ಸಿಗುವ ನಿರೀಕ್ಷೆಯಲ್ಲಿ ಇರುವುದಾಗಿ ತಿಳಿಸಿದರು.
ಸಮೀಪದ ಚೊಕ್ಕಹಳ್ಳಿಯಿಂದ ಮೇಕೆಗಳನ್ನು ಮಾರಲು ಬಂದಿದ್ದ ರೈತರೊಬ್ಬರು, ಒಂದು ಮೇಕೆ ಮಾರಾಟವಾಗಿದೆ. ಮತ್ತೊಂದು ಮಾರಾಟವಾಗಬೇಕಾಗಿದೆ ಎನ್ನುತ್ತಾ, ಯುಗಾದಿ ಹೊಸ ದುಡುಕು ಸಂತೆಯಲ್ಲಿ 10ರಿಂದ 15 ಕೆಜಿ ಅಸುಪಾಸಿನ ಕುರಿ. ಮೇಕೆಗಳು ಮಾತ್ರ ಮಾರಾಟವಾಗುತ್ತದೆ. ಬಕ್ರೀದ್ ಹಬ್ಬದ ಸಂತೆಯಲ್ಲಿ ಕುರಿ ಮೇಕೆಗಳಿಗೆ ಹೆಚ್ಚಿನ ಬೇಡಿಕೆ ಇರುತ್ತೆ ಮತ್ತು ಒಳ್ಳೆ ಬೆಲೆಯೂ ಸಿಗುತ್ತದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.